ರಾಣೇಬೆನ್ನೂರು 8 : ರೈತರಲ್ಲಿ ಆಸೆ ಹುಟ್ಟಿಸಿ ಬಿತ್ತನೆ ಕಾರ್ಯ ಮುಗಿದ ಮೇಲೆ ಮುಂಗಾರು ಮಳೆ ಕೈಕೊಟ್ಟಿದೆ, ಶಿವಮೊಗ್ಗ, ಚಿಕ್ಕಮಗಳೂರು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿ ಜಲಾಶಗಳು ಭರ್ತಿಯಾಗಿರುವುದರಿಂದ ಈ ಭಾಗದಲ್ಲಿ ಮಳೆಯನ್ನೆ ನಂಬಿ ಬಿತ್ತನೆ ಮಾಡಿದ ರೈತ ಈಗ ಆಕಾಶದ ಕಡೆ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭೂಮಿ ಹಸಿ ಇದ್ದಾಗ ಬಿತ್ತಿದ ಪರಿಣಾಮ ಬೀಜಗಳು ಮೊಳಕೆಯೊಡೆದು ಬಿಸಿಲಿಗೆ ಬಾಯಿ ಬಿಡುತ್ತಿವೆ. ದುಬಾರಿ ವೆಚ್ಚದ ರಾಸಾಯನಿಕ ಗೊಬ್ಬರ, ಬೀಜ ಖರೀದಿಸಿದ ರೈತ ಕಾಂಗಾಲಾಗಿದ್ದಾನೆ ಕೂಡಲೇ ಅಪ್ಪರತುಂಗಾ ಯೋಜನೆಯ ಮುಖ್ಯ ಕಾಲುವೆಗೆ ನೀರಾವರಿ ಇಲಾಖೆಯ ಅಧಿಕಾರಿಗಳು ವರ್ಷದ ನೀರು ಬಿಡುವ ವಾಡಿಕೆಯ ದಿನಾಂಕಕ್ಕೆ ಕಾಯದೆ ಇಂದೇ ಕಾಲುವೆಗೆ ನೀರು ಹರಿಸಿ ಒಣಗುತ್ತಿರುವ ಬೆಳೆಗಳಿಗೆ ನೀರುಣಿಸುವ ಕಾರ್ಯವನ್ನು ಮಾಡಬೇಕು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ತುರ್ತು ಗಮನಹರಿಸಬೇಂದು ರೈತ ಮುಖಂಡ ರವೀಂದ್ರಗೌಡ ಎಫ್ ಪಾಟೀಲ ಸಚಿವರು ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.