ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಲು ಸಚಿವ ಬಿ.ಎ.ಬಸವರಾಜ ಸೂಚನೆ

ಹಾವೇರಿ: ಜು.04:  ಹಾವೇರಿ ಹಾಗೂ ರಾಣೇಬೆನ್ನೂರು ನಗರಗಳ ಯುಜಿಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಬರುವ ಆಗಸ್ಟ್ 15ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ಅವರು ತಿಳಿಸಿದರು.

ಹಾವೇರಿ ನಗರಸಭೆ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಗಸ್ಟ್ 15 ರಂದು ಕಾಮಗಾರಿಗಳ ಉದ್ಘಾಟನೆಗೆ ಪುನಃ ಹಾವೇರಿಗೆ ಆಗಮಿಸುವೆ ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಬಾಡವಣೆ ಅಭಿವೃದ್ಧಿಗೆ ಸೂಚಿಸಲಾಗಿದೆ ಹಾಗೂ ಹೊಸ ಬಡಾವಣೆಗಳ ರಚನೆ ಸಂದರ್ಭದಲ್ಲಿ  ರೈತರಿಗೆ ಶೇ.50 ಹಾಗೂ ಖಾಸಗಿ ಅವರಿಗೆ ಶೇ.50ರ ಅನುಪಾತದಲ್ಲಿ ಹಂಚಿಕೆ ಮಾಡಲು ತಿಳಿಸಲಾಗಿದೆ.

   ಬಳ್ಳಾರಿಯಲ್ಲಿ 102 ಎಕರೆ ಜಮೀನು ಶೇ.50-50 ಅನುಪಾತದಲ್ಲಿ ಬಡಾವಣೆ ಮಾಡಲಾಗಿದೆ. ಸಕರ್ಾರದ ಆದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಪತ್ರಕರ್ತರು ಕೆಲಸ ನಿರ್ವಹಿಸುತ್ತಿದ್ದು, ಹೊಸ ಬಡಾವಣೆಗಳ ರಚನೆ ಸಂದರ್ಭದಲ್ಲಿ ಶೇ.5 ರಷ್ಟು ಪತ್ರಕರ್ತರಿಗೆ ಮೀಸಲು ಇರಿಸಲು ಸಕರ್ಾರ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೀಸ್ಗೆ ನೀಡಲಾದ ಆಸ್ತಿಗಳ ಹಣ ಸಂದಾಯವಾಗುತ್ತಿಲ್ಲ ಹಾಗೂ ನವೀಕರಣ ಮಾಡಲಾಗುತ್ತಿಲ್ಲ. ಹಾಗಾಗಿ ಸಕರ್ಾರದ ನಿಗಧಿಪಡಿಸಿದ ದರದಲ್ಲಿ ಲೀಸ್ ಪಡೆದವರಿಗೆ ಆಸ್ತಿನೀಡಿ ಸಕರ್ಾರದ ಬೊಕ್ಕಸಕ್ಕೆ ಹಣ ಕ್ರೋಢಿಕರಿಸಲಾಗುವುದು. 

      ಹಾವೇರಿ ನಗರಸಭೆ 22 ಹಾಗೂ ರಾಣೇಬೆನ್ನೂರು ನಗರಸಭೆ 16 ಪೌರ ಕಾಮರ್ಿಕರನ್ನು ಮರು ನೇಮಕಾತಿಗೆ ಸೂಚನೆ ನೀಡಲಾಗಿದೆ.  ವಾಟರ್ಮನ್ಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಆಥರ್ಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಂದು ಸಾವಿರ ಹಾಸಿಗೆ ಸಿದ್ಧಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಕೋವಿಡ್ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ. ಸಕರ್ಾರ ಮತ್ತು ಜಿಲ್ಲಾಡಳಿತ  ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶಾಸಕರಾದ  ನೆಹರು ಓಲೇಕಾರ ಹಾಗೂ ಅರುಣಕುಮಾರ ಗುತ್ತೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ನಗರಸಭೆ ಆಯುಕ್ತರಾದ ಬಸವರಾಜ ಜಿದ್ದಿ ಉಪಸ್ಥಿತರಿದ್ದರು.