ಡಾ, ಟಿ.ಹೆಚ್ ಮುಲ್ಲಾಗೆ ಅಳವಂಡಿ ಗ್ರಾಮದಲ್ಲಿ ಅಂಜುಮನ್ ಕಮಿಟಿಯಿಂದ ಸನ್ಮಾನ
Dr. T.H. Mulla felicitated by Anjuman Committee in Alavandi village
ಡಾ, ಟಿ.ಹೆಚ್ ಮುಲ್ಲಾಗೆ ಅಳವಂಡಿ ಗ್ರಾಮದಲ್ಲಿ ಅಂಜುಮನ್ ಕಮಿಟಿಯಿಂದ ಸನ್ಮಾನ
ಕೊಪ್ಪಳ 08: ಹಿರಿಯ ವೈದ್ಯ ನಿವೃತ್ತ ಡಿ, ಎಚ್, ಓ, ಡಾ, ಟಿ,ಎಚ್, ಮುಲ್ಲಾ ರವರಿಗೆ ಅಳವಂಡಿ ಗ್ರಾಮ ದಲ್ಲಿ ಅಲ್ಲಿನ ಅಂಜುಮನ್ ಕಮಿಟಿ ವತಿಯಿಂದ ಹಜರತ್ ಮಹಬೂಬೇ ಸುಭಾನಿ ಜಗ್ಯಾರವಿ ಶರೀಫ್ ಹಬ್ಬದ ಸಂದರ್ಭದಲ್ಲಿ ವಿಶೇಷ ಸನ್ಮಾನ ಮಾಡಿ ಗೌರವಿಸಲಾಯಿತು, ಡಾ, ಟಿ.ಹೆಚ್. ಮುಲ್ಲಾ ರವರು ಅಳವಂಡಿ ಗ್ರಾಮದ ಪಕ್ಕದ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ನಿವಾಸಿಯಾಗಿದ್ದು ಅವರು ಸುಮಾರು ಒಂದು ದಶಕಗಳ ಕಾಲ ಅಳವಂಡಿ ಗ್ರಾಮದಲ್ಲಿ ತಮ್ಮ ಆರಂಭಿಕ ವೈದ್ಯಕೀಯ ಸೇವೆ ಪ್ರಾರಂಭಿಸಿ ನಂತರ ಕೊಪ್ಪಳಕ್ಕೆ ಬಂದಿದ್ದರು ,ಅಲ್ಲದೇ ಇತ್ತೀಚಿಗಷ್ಟೇ ಅವರಿಗೆ ಅವರ ವೈದ್ಯಕೀಯ ಸೇವೆಗಾಗಿ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಸೇರಿದಂತೆ ವಿವಿಧ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಅವರನ್ನು ಅಳವಂಡಿ ಗ್ರಾಮಕ್ಕೆ ಕರೆಸಿ ಅಲ್ಲಿನ ಅಂಜುಮನ್ ಕಮಿಟಿಯ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಬೆಳಗಟ್ಟಿ ದರ್ಗಾ ಶರೀಫ್ ನ ಪೀಠಾಧಿಪತಿ ಗುರುಗಳು, ರಾಶಿದ ಖಾಜಿ ಗುರುಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಮೂರ್ತಿ ಸ್ವಾಮಿ ಇನಾಮ್ದಾರ್, ಅಲ್ಲದೆ ಅಂಜುಮನ್ ಕಮಿಟಿಯ ಅಧ್ಯಕ್ಷ ಅನ್ವರ್ ಗಡಾದ್ ಸೇರಿದಂತೆ ಗ್ರಾಮದ ಜನ ಪ್ರತಿನಿಧಿಗಳು ಗಣ್ಯರು ಮತ್ತಿತರರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 