ಡಾ, ಸುಶೀಲ್ ಕುಮಾರ್ ಕಲಾಲ್ ರಿಂದ ಬಡವರಿಗೆ ಆಹಾರ ಸಾಮಾಗ್ರಿಗಳ ಹಬ್ಬದ ಕಿಟ್ ವಿತರಣೆ
Dr. Sushil Kumar Kalal distributes festive kits of food items to the poor
ಕೊಪ್ಪಳ 17: ಡಾ, ಎಲ್,ಬಿ,ಕಲಾಲ್ ಮೆಮೋರಿಯಲ್ ತಾರಾ ಕ್ಲಿನಿಕ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಕೊಪ್ಪಳ ಸದ್ಭಾವನಾ ವೇದಿಕೆಯ ಅಧ್ಯಕ್ಷ ಡಾ, ಸುಶೀಲ್ ಕುಮಾರ್ ಕಲಾಲ್ ರವರಿಂದ ರಮಜಾನ್ ಹಬ್ಬ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಬಡ ನಿರ್ಗತಿಕ ಹಿಂದೂ ಮುಸ್ಲಿಮ ಕುಟುಂಬ ದವರಿಗೆ ಆಹಾರ ಸಾಮಗ್ರಿಗಳ ಹಬ್ಬದ ಕಿಟನ್ನು ವಿತರಿಸಿದರು, ಯುಗಾದಿ ಮತ್ತು ರಮಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಒಂದು ನೂರುಆಹಾರ ಸಾಮಗ್ರಿಗಳ ಕಿಟ್ಟನ್ನು ವಿತರಿಸಿ ಬಡ ಕುಟುಂಬದವರು ತಮ್ಮ ತಮ್ಮ ಮನೆಯಲ್ಲಿ ಹಬ್ಬ ಆಚರಿಸಿ ಕೊಳ್ಳಲು ಅನುಕೂಲ ಮಾಡಿ ವ್ಯವಸ್ಥೆಗೊಳಿಸಿರುವ ಡಾ, ಸುಶೀಲ್ ಕುಮಾರ್ ಕಲಾಲ್ ರವರ ಈ ಸೇವಾ ಕಾರ್ಯಕ್ಕೆ ವಿವಿಧ ಸಂಘಟನೆಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ಅಭಿನಂದಿಸಿದ್ದಾರೆ, ಸೋಮವಾರದಂದು ಸಂಜೆ ವೇಳೆಗೆ ಸಾಂಕೇತಿಕವಾಗಿ ಆಹಾರ ಸಾಮಗ್ರಿಗಳ ಕಿಟ್ಟನ್ನು ವಿತರಿಸಿದ ಈ ಸಂದರ್ಭದಲ್ಲಿ ವಾಗ್ಮಿ ಪ್ರವಚನಕಾರ ಇಲಕಲ್ ನ ಲಾಲ್ ಹುಸೇನ್ ಕಂದಗಲ್, ಲಿಂಗಾಯತ್ ಧರ್ಮ ಮಹಾಸಭಾ ರಾಜ್ಯ ಅಧ್ಯಕ್ಷ ಈಶಣ್ಣ ಕೊಲ9 ಹಳ್ಳಿ ,ಬಸವ ಸಮಿತಿ ಜಿಲ್ಲಾಅಧ್ಯಕ್ಷ ಬಸವರಾಜ್ ಬಳ್ಳೊಳ್ಳಿ, ವಿಜನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಶಾಹಿದ್ ಹುಸೇನ್ ತಹಸಿಲ್ದಾರ್, ಸಮಾಜದ ಮುಖಂಡ ಮುಸ್ತಫಾ ಕುದುರೆಮೋತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 