ಡಾ. ಸಾಯಿ ಸೂರಜ ಕೋಟೇರ ಅವರಿಗೆ ಖವರ್ಷದ ಉದಯೋನ್ಮುಖ ಸಿಟಿವಿಸ್ ಸರ್ಜನ್ ಗರಿ
Dr. Sai Suraj Kotera was awarded the Emerging City Surgeon of the Year award.
ಡಾ. ಸಾಯಿ ಸೂರಜ ಕೋಟೇರ ಅವರಿಗೆ ಖವರ್ಷದ ಉದಯೋನ್ಮುಖ ಸಿಟಿವಿಸ್ ಸರ್ಜನ್ ಗರಿ
ಧಾರವಾಡ 15: ಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನ ಹೃದಯ ಶಸ್ತ್ರಚಿಕಿತ್ಸಕ ಡಾ. ಸಾಯಿ ಸೂರಜ ಕೋಟೇರ ಅವರಿಗೆ ವಾಯ್ಸ್ ಆಫ್ ಹೆಲ್ತ್ ಕೇರ್ ನಿಂದ ಕೊಡಮಾಡಲ್ಪಡುವ ’ವರ್ಷದ ಉದಯೋನ್ಮುಖ ಅಖಿಗಿಖ (ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕ್ಯೂಲರ್ ಸರ್ಜರಿ) ಸರ್ಜನ್ - ಪ್ರಾದೇಶಿಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವ ದೆಹಲಿಯಲ್ಲಿ ನಡೆದ ಕಾರ್ಡಿಯಾಕ್ ಎಕ್ಸಲೆನ್ಸ್ -2025 ಪ್ರಶಸ್ತಿ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಪಡೆದರು. ವಿಒಎಚ್ (ಗಿಓಊ) ಆಯೋಜಿಸಿದ್ದ ಮತ್ತು ನಾರಾಯಣ ಹೆಲ್ತ್ ಬೆಂಬಲಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಮನ್ನಣೆಯು ಡಾ. ಕೋಟೇರ ಅವರಿಗೆ ಅವರ ಶಸ್ತ್ರಚಿಕಿತ್ಸಾ ಪರಿಣತಿ, ಕ್ಲಿನಿಕಲ್ ಶ್ರೇಷ್ಠತೆ ಮತ್ತು ಈ ಕ್ಷೇತ್ರದಲ್ಲಿ ಅವರು ನೀಡುತ್ತಿರುವ ಕೊಡುಗೆಗಳನ್ನು ಪರಿಗಣಿಸಿ ಕೊಡಲಾಗಿದೆ. ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಸಹೋದ್ಯೋಗಿಗಳು, ಸಿಬ್ಬಂದಿಗಳು ಹಾಗೂ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶಶಿಕುಮಾರ ಪಟ್ಟಣಶೆಟ್ಟಿಯವರು ಡಾ. ಸಾಯಿ ಸೂರಜ ಕೋಟೇರ ಅವರಿಗೆ ಅಭಿನಂದಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 