ಡಾ. ಎಸ್‌.ಎಲ್‌. ಭೈರ​ಪ್ಪನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ

ಡಾ. ಎಸ್‌.ಎಲ್‌. ಭೈರ​ಪ್ಪನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ Dr. S.L. Bhyrappa's thoughts are relevant for all times.

ಹುಲಿಕೋಟೆ 28:  ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸ, ಸಮಾಜ, ಸಂಗೀತ, ಮಾನವೀಯ ಜೀವನ ಮೌಲ್ಯಗಳನ್ನು ಕಾದಂಬರಿ ಸಾಹಿತ್ಯದ ಮೂಲಕ ಮನಮುಟ್ಟುವಂತೆ ಚಿತ್ರಿಸಿ ಭಾರತೀಯ ಕಾದಂಬರಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತವಾಗಿಸಿರುವ ಡಾ. ಎಸ್‌.ಎಲ್‌. ಭೈರಪ್ಪನವರ (1931-2025) ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವೆಂದು ಪ್ರೊ. ಸುಧಾ ಕೌಜಗೇರಿ ಹೇಳಿದರು. 

ಅವರು ಹುಲಕೋಟಿಯ ಕೆ.ಎಚ್‌. ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಐಕ್ಯುಎಸಿ ಘಟಕದ ಅಡಿಯಲ್ಲಿ ಹಮ್ಮಿಕೊಂಡಿದ್ದ ‘ಡಾ. ಎಸ್‌.ಎಲ್‌. ಭೈರ​‍್ಪ ನುಡಿನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿಶಿಷ್ಟ ಶೈಲಿಯ ಬರಹದಿಂದ ಅಪಾರ ಸಂಖ್ಯೆಯ ಓದುಗರನ್ನು ಸೃಷ್ಟಿಸಿಕೊಂಡಿರುವ ಭೈರ​‍್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಕಾಯ್ದುಕೊಂಡ ಕನ್ನಡನಾಡಿನ ಅಪೂರ್ವ ಲೇಖಕರಾಗಿದ್ದು, ಅವರ ಬರಹ ಮತ್ತು ವ್ಯಕ್ತಿತ್ವ ಯುವಕರಿಗೆ ದಾರೀದೀಪವೆಂದು ಹೇಳಿದರು. 

ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಎನ್‌.ಎಸ್‌.ಎಸ್‌. ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ ‘ಭೈರ​‍್ಪನವರ ಕಾದಂಬರಿಗಳಲ್ಲಿ ಐತಿಹಾಸಿಕ ಚಿಂತನೆಗಳು’, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಉಲ್ಲಾಸ ಶೆಟ್ಟಿ ‘ಭೈರ​‍್ಪನವರ ಕಾದಂಬರಿಗಳಲ್ಲಿ ವೈಜ್ಞಾನಿಕ ವಿಚಾರಗಳು’, ಪ್ರೊ. ಲಕ್ಷ್ಮಣ ಮುಳಗುಂದ ‘ಭೈರ​‍್ಪನವರ ಕಾದಂಬರಿಗಳಲ್ಲಿ ದೈನಂದಿನ ವ್ಯವಹಾರಿಕ ಸಂಗತಿಗಳು’, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಐಕ್ಯುಎಸಿ ಘಟಕದ ಸಂಯೋಜಕ ಡಾ. ಜಿತೇಂದ್ರ ಜಹಾಗೀರದಾರ ‘ಭೈರ​‍್ಪನವರ ಕಾದಂಬರಿಗಳಲ್ಲಿ ತಾತ್ವಿಕ ಚಿಂತನೆಗಳು’, ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ‘ಭೈರ​‍್ಪನವರ ಕಾದಂಬರಿಗಳಲ್ಲಿ ಮಾನವೀಯ ಜೀವನ ಮೌಲ್ಯಗಳು’, ಕನ್ನಡ ಪ್ರಾಧ್ಯಾಪಕ ಭೀಮೇಶ ‘ಭೈರ​‍್ಪನವರ ಕಾದಂಬರಿಗಳಲ್ಲಿ ಗ್ರಾಮೀಣ ಬದುಕು’, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸುಭಾಸ ಹರಿಹರ ‘ಭೈರ​‍್ಪನವರ ಕಾದಂಬರಿಗಳಲ್ಲಿ ರಾಜಕೀಯ ವಿಚಾರಗಳು’, ಇಂಗ್ಲೀಷ ವಿಭಾಗದ ಮುಖ್ಯಸ್ಥೆ ಮಹಾನಂದಾ ಹಿರೇಮಠ ‘ಆಂಗ್ಲ ಭಾಷೆಗೆ ಅನುವಾದಿತ ಭೈರ​‍್ಪನವರ ಕಾದಂಬರಿಗಳ ವೈಶಿಷ್ಟ್ಯತೆ’, ಇಂಗ್ಲೀಷ ಪ್ರಾಧ್ಯಾಪಕಿ ಸಾವಿತ್ರಿ ಟಿ. ‘ಭೈರ​‍್ಪನವರ ಕಾದಂಬರಿಗಳ ಜನಪ್ರಿಯತೆ ಮತ್ತು ಪ್ರಸ್ತುತತೆ’ ಕುರಿತು ಮಾತನಾಡುತ್ತ ನುಡಿನಮನ ಸಲ್ಲಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.