ಡಾ. ಎಂ ಎನ್ ಸತ್ಯನಾರಾಯಣ ಅವರಿಗೆ ಪ್ರಶಸ್ತಿ ಪ್ರದಾನ

ಡಾ. ಎಂ ಎನ್ ಸತ್ಯನಾರಾಯಣ ಅವರಿಗೆ ಪ್ರಶಸ್ತಿ ಪ್ರದಾನ  Dr. M. N. Satyanarayana was awarded


ಬೆಳಗಾವಿ 03: ಬೆಂಗಳೂರಿನ ಚಿತ್ರಸಂತೆಯಿಂದ ಸಂಗೀತ ಕ್ಷೇತ್ರದಲ್ಲಿ 17 ವರ್ಷಗಳಿಂದ ಮಕ್ಕಳಿಗೆ ನಾದಸುಧಾ ಸುಗಮ ಸಂಗೀತಾ ಶಾಲೆಯ ಮೂಲಕ ಸಂಗೀತವನ್ನು ಧಾರೆಯುತ್ತಿರುವ ಬೆಳಗಾವಿಯ ಡಾಽ ಎಂ ಎನ್ ಸತ್ಯನಾರಾಯಣ ಅವರಿಗೆ ಬೆಂಗಳೂರಿನ ಚಿತ್ರಸಂತೆಯವರು ಹೈಡ್ ಪಾರ್ಕ್‌ ನಲ್ಲಿ ಆಯೋಜಿಸಿದ್ದ ಹೆಮ್ಮೆಯ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ "ಬೆಸ್ಟ್‌-ಮ್ಯುಸಿಷಿಯನ್"" ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಪ್ರಸಿದ್ಧ ನಟಿ ಸುಧಾ ಬೆಳವಾಡಿ ಅವರು ಸೇರಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗಿರಿ ಗೌಡರ್ ಅವರ ಚಿತ್ರಸಂತೆಯ 157ನೇ ಸಂಚಿಕೆ ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಸಂಯುಕ್ತ ಹೊರನಾಡು ಅವರು ಮಾತನಾಡಿ ಕರ್ನಾಟಕದಾದ್ಯಂತ, ಬೇರೆ ಬೇರೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಮಾಡಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವ ಚಿತ್ರಸಂತೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹಾಡಿ ಹೊಗಳಿದರು.  ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿರುವ 25 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.