ರಕ್ತದಾನ ಮಾಡಿ ಮಾದರಿಯಾದ ಡಾ.ಗೀರಿಶ್ ಪಾಟೀಲ
Dr. Girish Patil becomes a role model by donating blood
ಇಂಡಿ 16: ತಾಲೂಕಿನ ಸುಕ್ಷೇತ್ರ ತಡವಲಗಾ (ಜೋಡಗುಡಿ) ಗ್ರಾಮದ ಮರುಳಸಿದ್ದೇಶ್ವರ ರಥೋತ್ಸವ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀ ದೇವಸ್ಥಾನ ಕಳಸಾ ರೋಣ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಿಮಿತ್ತವಾಗಿ ಎರಡೂ ದಿನಗಳ ಕಾಲ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ತಾವೇ ಮೊದಲು ರಕ್ತದಾನ ಮಾಡಿದ ತಡವಲಗಾ ಸಮುದಾಯದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗೀರೀಶ್ ಪಾಟೀಲ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ನಂತರ ಮಾತನಾಡಿದ ಅವರು ರಕ್ತದಾನವು ಜೀವ ಉಳಿಸುವ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಒಂದು ಮಹತ್ವದ ಕಾರ್ಯವಾಗಿದೆ. ಇದು ತುರ್ತು ಸಂದರ್ಭಗಳಲ್ಲಿ, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ಮತ್ತು ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡುತ್ತದೆ. ದಾನಿಯಿಂದ ದೇಹದ ಕಬ್ಬಿಣದ ಮಟ್ಟವನ್ನು ನಿಯಂತ್ರಿಸಲು, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು, ಮತ್ತು ಉಚಿತ ಆರೋಗ್ಯ ತಪಾಸಣೆಯನ್ನು ಪಡೆಯಲು ಇದು ಸಹಾಯಕವಾಗಿದೆ ಎಂದು ಹೇಳಿದರು.
ಪೋಲಿಸ್ ಇಲಾಖೆಯ ಶ್ರೀಶೈಲ ಗಾಯನವರ ಕೂಡಾ ಅವರು ರಕ್ತದಾನ ಮಾಡಿ ಮಾದಿರಿ ಆದರೂ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ರೇವಣಸಿದ್ದ ಲಾಳಸಂಗಿ, ಮಾಯಪ್ಪ ಬಗಲಿ, ರಘು ಚವ್ಹಾಣ, ಡಾ ಸೀಮಾ ಮಮದಾಪೂರ, ರೇಖಾ ಸಿಂಪಿ, ಸಪ್ನಾ ಅಂಗಡಿ, ಅರುಣ ಕುಮಾರ್ ಕಾಂಬ್ಳೆ ಹಾಗೂ ಗ್ರಾಮದ ಹಿರಿಯರಾದ ಬಸವರಾಜ ಇಂಡಿ, ಕೃಷ್ಣಪ್ಪ ಮಿರ್ಜಿ, ಸಂಪತಕುಮಾರ ಹಿಳ್ಳಿ, ಕೆ ಎನ್ ಕಲ್ಯಾಣಿ, ತಮ್ಮಣ್ಣ ಪೂಜಾರಿ, ಮಳಸಿದ್ದಪ್ಪ ಖಸ್ಕಿ, ಜೇಟ್ಟಪ ಪಂತೋಜಿ, ಸಿದ್ದು ಲಾಳಸಂಗಿ, ಅಣಪ್ಪ ಜಾಲವಾದ, ಪೋಲಿಸ್ ಇಲಾಖೆ ಡಿ ಎಸ್ ಗಾಯಕವಾಡ, ಶ್ರೀಶೈಲ ಗಾಯನವರ, ಧಶರತ ಮಾದರ, ಎಚ್ ಬಬಲಾದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 