ಡಾ ಬಿ. ಆರ್. ಅಂಬೇಡ್ಕರವರ ಜಯಂತಿ ಆಚರಣೆ
Dr. B. R. Ambedkar Jayanti Celebration
ಲೋಕದರ್ಶನ ವರದಿ
ಕೊಪ್ಪಳ 15: ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ವತಿಯಿಂದ ಡಾ ಬಿ. ಆರ್. ಅಂಬೇಡ್ಕರವರ ಜಯಂತಿ ಆಚರಣೆ ಮಾಡಲಾಯಿತು.
ಕಂಪ್ಲಿಯ ಹಿರಿಯ ಬಸವಚೇತನ ಮತ್ತು ಮಹಾದಾಸೋಹಿ ಕೆ. ಎಂ. ಹೇಮಯ್ಯಸ್ವಾಮಿಯವರು ಮತ್ತು ಗಣ್ಯರು ಅಂಬೇಡಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ. ಎಸ್. ಪಾಟೀಲರವರು "ಸಂವಿಧಾನ ಕಾಯಿದೆಗಳು ಹಾಗೂ ನಿಯಮಗಳಲ್ಲಿ ಬಸವತತ್ವಗಳ ಪ್ರಭಾವ" ಕುರಿತಾಗಿ ಮಾತನಾಡಿದರು.
ಕೊಪ್ಪಳ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಯಲೆಯವರು ಅಂಬೇಡ್ಕರ್ ಜೀವನ ಮೌಲ್ಯಗಳು ಮತ್ತು ಸಾಧನೆಗಳು" ಕುರಿತು ಮಾತನಾಡಿದರು.
ಬಸವಕಲ್ಯಾಣದ ಯೋಗಗುರು ಲೋಕೇಶ ಗುರೂಜಿ, ಶರಣತತ್ವ ಚಿಂತಕ ಅಮರೇಶಪ್ಪ ಬಳ್ಳಾರಿ, ಬಸವತತ್ವ ಅನುಯಾಯಿ ಗಾಳೆಪ್ಪ ಕಡೆಮನಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಪ್ರವಚನ ಯಥಾರೀತಿ ಮುಂದುವರೆಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 