ಡಾ ಬಿ. ಆರ್. ಅಂಬೇಡ್ಕರವರ ಜಯಂತಿ ಆಚರಣೆ
Dr. B. R. Ambedkar Jayanti Celebration
ಲೋಕದರ್ಶನ ವರದಿ
ಕೊಪ್ಪಳ 15: ವಿಶ್ವಗುರು ಬಸವೇಶ್ವರ ಟ್ರಸ್ಟ್ ಮತ್ತು ಪ್ರವಚನ ಸೇವಾ ಸಮಿತಿ ವತಿಯಿಂದ ಡಾ ಬಿ. ಆರ್. ಅಂಬೇಡ್ಕರವರ ಜಯಂತಿ ಆಚರಣೆ ಮಾಡಲಾಯಿತು.
ಕಂಪ್ಲಿಯ ಹಿರಿಯ ಬಸವಚೇತನ ಮತ್ತು ಮಹಾದಾಸೋಹಿ ಕೆ. ಎಂ. ಹೇಮಯ್ಯಸ್ವಾಮಿಯವರು ಮತ್ತು ಗಣ್ಯರು ಅಂಬೇಡಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ. ಎಸ್. ಪಾಟೀಲರವರು "ಸಂವಿಧಾನ ಕಾಯಿದೆಗಳು ಹಾಗೂ ನಿಯಮಗಳಲ್ಲಿ ಬಸವತತ್ವಗಳ ಪ್ರಭಾವ" ಕುರಿತಾಗಿ ಮಾತನಾಡಿದರು.
ಕೊಪ್ಪಳ ಗವಿಸಿದ್ಧೇಶ್ವರ ಕಾಲೇಜಿನ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಯಲೆಯವರು ಅಂಬೇಡ್ಕರ್ ಜೀವನ ಮೌಲ್ಯಗಳು ಮತ್ತು ಸಾಧನೆಗಳು" ಕುರಿತು ಮಾತನಾಡಿದರು.
ಬಸವಕಲ್ಯಾಣದ ಯೋಗಗುರು ಲೋಕೇಶ ಗುರೂಜಿ, ಶರಣತತ್ವ ಚಿಂತಕ ಅಮರೇಶಪ್ಪ ಬಳ್ಳಾರಿ, ಬಸವತತ್ವ ಅನುಯಾಯಿ ಗಾಳೆಪ್ಪ ಕಡೆಮನಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಪ್ರವಚನ ಯಥಾರೀತಿ ಮುಂದುವರೆಯಿತು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 