ಡಾ. ಆನಂದ ಮಹಾರಾಜ ಹೊಸಾವಿ ಇವರಿಗೆ ಸನ್ಮಾನ

ಡಾ. ಆನಂದ ಮಹಾರಾಜ ಹೊಸಾವಿ ಇವರಿಗೆ ಸನ್ಮಾನ   Dr. Anand Maharaja Hosavi felicitated

ಯಮಕನಮರಡಿ, 02 :  ಹತ್ತರಗಿ ಯಮಕನಮಡಿ ಶ್ರೀಹರಿ ಮಂದಿರದ ಪೀಠಾಧ್ಯಕ್ಷರಾದ ಆನಂದ ಮಹಾರಾಜ ಗೋಸಾವಿ ಇವರಿಗೆ ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘ ಬೆಳಗಾವಿ ಉತ್ತರ ಕನ್ನಡ ಜಿಲ್ಲೆ ಇದರ ನಿರ್ದೇಶಕರಾದ ಎ.ಎಂ ಕರ್ನಾಚಿ ಸನ್ಮಾನಿಸಿದರು.  

ಇದೇ ಸಂದರ್ಭದಲ್ಲಿ ಯಮಕನಮರಡಿ ಸಿ.ಪಿ.ಐ ಜಾವೀದ ಮುಶಾಪರಿ ಇವರಿಗೆ ಡಾ. ಆನಂದ ಮಹಾರಾಜ ಗೋಸಾವಿ ಇವರು ಸತ್ಕರಿಸಿದರು.   

ಈ ವೇಳೆಯಲ್ಲಿ ಪತ್ರಕರ್ತ ಸುನಿಲ ದೇಸಾಯಿ, ಗೋಪಾಲ ಚಿಪಣಿ, ದೀಪಕ ನಾಡಗೌಡ, ಹನುಮಂತ ಗಾಡಿವಡ್ಡರ, ಮಹಾವೀರ ನಾಸಿಪುಡಿ, ಅಶೋಕ ಸಾಳೆ, ಮಲ್ಲೇಶ ಕೆಂಪಣ್ಣ ಕಾಂಬಳೆ, ಇನ್ನಿತರರು  ಇದ್ದರು.