ಗೊಬ್ಬರ ಖರೀದಿ ವೇಳೆ ಉಪ ಉತ್ಪನ್ನ ಲಿಂಕ್ ಬಳಕೆ ಬೇಡ

ಗೊಬ್ಬರ ಖರೀದಿ ವೇಳೆ ಉಪ ಉತ್ಪನ್ನ ಲಿಂಕ್ ಬಳಕೆ ಬೇಡ Do not use by-product links when purchasing fertilizer

ಲೋಕದರ್ಶನ ವರದಿ  

ಹೂವಿನಹಡಗಲಿ   27:  ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ರಸಗೊಬ್ಬರ ಖರೀದಿಸುವ ರೈತರಿಗೆ ಬೈಪ್ರಾಡಕ್ಟ್‌ (ಉಪ ಉತ್ಪನ್ನ)ಗಳನ್ನು ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಗೊಬ್ಬರ ಮಾರಾಟಗಾರರು ಹಾಗೂ ಫರ್ಟಿಲೈಸರ್ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ರಾಜ್ಯ ರೈತ ಸಂಘ  ಕೃಷಿ ಸಚಿವರನ್ನು ಒತ್ತಾಯಿಸಿದರು.ಇಲ್ಲಿನ ತಹಶಿಲ್ದಾರರ ಕೆ.ಎಂ.ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದರು.?ಗೊಬ್ಬರ ಬೆಲೆ ಏರಿಕೆ ಯಿಂದ ರೈತರು ಸಂಕಷ್ಟದ ಲ್ಲಿ ಇದ್ದು. ಮುಂಗಾರ ಬೆಳೆ ಬಿತ್ತನೆಗೆ ಸಿದ್ಧತೆಗಳನ್ನು ಮಾಡಿಕೊಂಡು ಇದೀಗ ಯೂರಿಯಾ ಗೊಬ್ಬರ ಖರೀದಿಗೆ ಈಋ ಜಾರಿಗೆ ತಂದು ಎಕರೆಗೆ ಒಂದು ಚೀಲ ಕೊಡುವುದಾಗಿ ಜಾರಿಗೆ ಬದಲು ಸಡಿಲಿಕೆ ಮಾಡಿ ಎಕರೆಗೆ ನಾಲ್ಕು ಚೀಲ ಕೊಡಬೇಕು. ಯೂರಿಯಾ ಜತೆಗೆ ಉಪ ಉತ್ಪನ್ನ ಲಿಂಕ್ ಬಳಸಬಹುದು ರದ್ದು ಮಾಡಬೇಕು ಜತೆಗೆ ಬಳ್ಳಾರಿ ಜಿಲ್ಲಾಧಿಕಾರಿಗಳು ನಿರ್ಣಯ ನಮ್ಮ ಜಿಲ್ಲೆಯಲ್ಲಿ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು.  ಈ ಸಂದರ್ಭದಲ್ಲಿತಾಲೂಕು ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಗೌರವ ಅಧ್ಯಕ್ಷ ಪಕ್ಕೀರ​‍್ಪ ಮಡ್ಡಿ , ಜಿಲ್ಲಾ ಮಹಿಳಾ ಅಧ್ಯಕ್ಷೆ ಃಊಒ ವಿಜಯಲಕ್ಷ್ಮಿ ಜಿಲ್ಲಾ ಉಪಾಧ್ಯಕ್ಷ ಕೆ. ಗನಿಸಾಬ್ ಬಾವಿಹಳ್ಳಿ,   ಪ್ರಧಾನ ಕಾರ್ಯದರ್ಶಿ ಶಿವರಾಜ ಎಂ ಹೊಳಗುಂದಿ,  ಜಿಲ್ಲಾ ಯುವ ಘಟಕ ಕಾರ್ಯದರ್ಶಿ ದುರುಗಪ್ಪ , ತಾಲೂಕು ಸಂಘಟನಾ ಕಾರ್ಯದರ್ಶಿ ಗೀರೀಶ್ ಡಿ ಬಸವರಾಜ್ ಇದ್ದರು.