ಆಸಂಗಿಯಲ್ಲಿ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ ಮುಕ್ತಾಯ
Dnyaneshwari Parayana in Asangi, Harinama week concludes
ಲೋಕದರ್ಶನ ವರದಿ
ಆಸಂಗಿಯಲ್ಲಿ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ ಮುಕ್ತಾಯ
ರಬಕವಿ-ಬನಹಟ್ಟಿ 04: ತಾಲೂಕಿನ ಆಸಂಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಕಳೆದೊಂದು ವಾರದಿಂದ ಜರುಗಿದ ಶ್ರೀ ಸಂತ ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಪರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಒಂದು ವಾರ ಕಾಲ ಜರುಗಿದ ಪಾರಾಯಣದ ಸಮಾರೋಪದಲ್ಲಿ ದಿಂಡಿ ಸೋಹಳಾ ಮಹಾಪ್ರಸಾದವು ಜರುಗಿತು.
ನೂರಾರು ಸದ್ಭಕ್ತರು ಜ್ಞಾನೇಶ್ವರ ಪಾರಾಯಣದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಾಳಗೋಪಾಳ, ತಾಳ, ಮೃದಂಗ ಸಮೇತ ಭಕ್ತರು ಆಗಮಿಸಿದ್ದು ಕಾರ್ಯಕ್ರಮ ನೋಡುಗರ ಮನ ಸೆಳೆಯಿತು.
ಸತತ ಏಳು ದಿನಗಳ ಕಾಲ ಪುಂಡಲೀಕರಾವ್ ಜ್ಞಾನಮೋಠೆ (ಜಿ.ಪಿ. ರಾವ್) ಅವರಿಂದ ಶ್ರೀ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ನಡೆಸಿಕೊಟ್ಟರು.
ಪಾಂಡು ಸಾಲಗುಡೆ, ಕೃಷ್ಣಾ ಸಿಂಧೆ, ದೋಂಡಿಬಾ ಗಾಯಕವಾಡ, ವಿಠ್ಠಲ ಗಾಯಕವಾಡ, ಜ್ಯೋತಿಬಾ ಲೊಂಡೆ, ಪರಶುರಾಮ ಸಾಳುಂಕೆ, ಪಾಂಡು ಶಿರೋಳ, ಕೇದಾರಿ ದುಂಬಾಳೆ, ಪ್ರಕಾಶ ರಾವಳ, ರಾಮಚಂದ್ರ ಪವಾರ, ವಿಠ್ಠಲ ಪೂಜಾರಿ ಸೇರಿದಂತೆ ಅನೇಕರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 