ಆಸಂಗಿಯಲ್ಲಿ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ ಮುಕ್ತಾಯ
Dnyaneshwari Parayana in Asangi, Harinama week concludes
ಲೋಕದರ್ಶನ ವರದಿ
ಆಸಂಗಿಯಲ್ಲಿ ಜ್ಞಾನೇಶ್ವರಿ ಪಾರಾಯಣ, ಹರಿನಾಮ ಸಪ್ತಾಹ ಮುಕ್ತಾಯ
ರಬಕವಿ-ಬನಹಟ್ಟಿ 04: ತಾಲೂಕಿನ ಆಸಂಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಕಳೆದೊಂದು ವಾರದಿಂದ ಜರುಗಿದ ಶ್ರೀ ಸಂತ ಗ್ರಂಥರಾಜ ಶ್ರೀ ಜ್ಞಾನೇಶ್ವರಿ ಪರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಒಂದು ವಾರ ಕಾಲ ಜರುಗಿದ ಪಾರಾಯಣದ ಸಮಾರೋಪದಲ್ಲಿ ದಿಂಡಿ ಸೋಹಳಾ ಮಹಾಪ್ರಸಾದವು ಜರುಗಿತು.
ನೂರಾರು ಸದ್ಭಕ್ತರು ಜ್ಞಾನೇಶ್ವರ ಪಾರಾಯಣದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಾಳಗೋಪಾಳ, ತಾಳ, ಮೃದಂಗ ಸಮೇತ ಭಕ್ತರು ಆಗಮಿಸಿದ್ದು ಕಾರ್ಯಕ್ರಮ ನೋಡುಗರ ಮನ ಸೆಳೆಯಿತು.
ಸತತ ಏಳು ದಿನಗಳ ಕಾಲ ಪುಂಡಲೀಕರಾವ್ ಜ್ಞಾನಮೋಠೆ (ಜಿ.ಪಿ. ರಾವ್) ಅವರಿಂದ ಶ್ರೀ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ನಡೆಸಿಕೊಟ್ಟರು.
ಪಾಂಡು ಸಾಲಗುಡೆ, ಕೃಷ್ಣಾ ಸಿಂಧೆ, ದೋಂಡಿಬಾ ಗಾಯಕವಾಡ, ವಿಠ್ಠಲ ಗಾಯಕವಾಡ, ಜ್ಯೋತಿಬಾ ಲೊಂಡೆ, ಪರಶುರಾಮ ಸಾಳುಂಕೆ, ಪಾಂಡು ಶಿರೋಳ, ಕೇದಾರಿ ದುಂಬಾಳೆ, ಪ್ರಕಾಶ ರಾವಳ, ರಾಮಚಂದ್ರ ಪವಾರ, ವಿಠ್ಠಲ ಪೂಜಾರಿ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 