ದೀಪಾವಳಿ ಆಚರಣೆ ಪರಿಸರ ಸ್ನೆಹಹಿಯಾಗಿರಲಿ : ರವಿಚೇತನ್ಯ
Diwali celebrations should be eco-friendly: Ravi Chetanya
ದೀಪಾವಳಿ ಆಚರಣೆ ಪರಿಸರ ಸ್ನೆಹಹಿಯಾಗಿರಲಿ : ರವಿಚೇತನ್ಯ
ಗಂಗಾವತಿ 18 : ಅಕ್ಷರ ಪಬ್ಲಿಕ್ ಶಾಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಲಾಯಿತು.ವಿದ್ಯಾರ್ಥಿಗಳು ಅಲಂಕಾರಿಕ ಹಾಗೂ ಪುಷ್ಪಗಳಿಂದ ರಂಗೋಲಿ ಬಿಡಿಸಿ ಗಮನ ಸೆಳೆದರು. ಈ ವೇಳೆ ಸಂಸ್ಥೆಯ ಅಧ್ಯಕ್ಷರು ರವಿಚೇತನ್ಯ ರೆಡ್ಡಿ ಮಾತನಾಡಿ ವರ್ಣರಂಜಿತ ಹಬ್ಬ ದೀಪಾವಳಿ ಬಂದಿದೆ. ದೇಶ ಒಂದೇ ಆದರೂ ನೂರು ವಿಭಿನ್ನ ಸಂಸ್ಕೃತಿಗಳು ನೆಲೆಗೊಂಡಿರುವ ಭಾರತದ ಯಾವುದೇ ಮೂಲೆಗೆ ಹೋದರೂ ದೀಪಾವಳಿ ವೈಭವ ಕಾಣಸಿಗುತ್ತದೆ. ಆದರೆ ಅದನ್ನು ಕರೆಯುವ, ಆಚರಿಸುವ ವಿಧಾನಗಳು ಮಾತ್ರ ತುಸು ಭಿನ್ನ. ಸಂಭ್ರಮ ಮಾತ್ರ ನಿತ್ಯನೂತನ. ಹಣತೆ ಬೆಳಗಿಸಿ. ಮಾಲಿನ್ಯ ತಡೆಯಿರಿ, ಮಾಲಿನ್ಯಕಾರಿ ಪಟಾಕಿ ತ್ಯಜಿಸಿ, ಹಸಿರು ಪಟಾಕಿ ಬಳಸಿ, ಮಾಲಿನ್ಯ ಮುಕ್ತ ದೀಪಾವಳಿ ಆಚರಿಸಿ, ಹಸಿರು ದೀಪಾವಳಿ - ಪರಿಸರ ದೀಪಾವಳಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ಮಾಲಿನ್ಯಮುಕ್ತ ದೀಪಾವಳಿ ಆಚರಣೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಶಿಕ್ಷಕಿಯರು ಅನೀತಾ,ವೈದೇಹಿ,ಶ್ವೇತಾ,ಸುಜಾತ,ಗಂಗಾ,ಜ್ಯೋತಿ ಅನ್ನಪೂರ್ಣ,ಭಾರತಿ ಸಿಬ್ಬಂದಿ ವರ್ಗ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 