ಕರವೇ ಸಂಘಟನೆ ಬಲಿಷ್ಠಗೂಳಿಸಲು ಜಿಲ್ಲಾ ಪದಾಧಿಕಾರಿಗಳ ಸಭೆ
District office bearers meet to strengthen Karave organization
ಕೊಪ್ಪಳ 18: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಸೂಚನೆ ಮೇರೆಗೆ ಜಿಲ್ಲಾದ್ಯಂತ ಸಂಘಟನೆಯನ್ನು ಬಲಪಡಿಸಬೇಕುಎಂದುಕರವೇಜಿಲ್ಲಾಧ್ಯಕ್ಷ ಬಿ.ಗೀರೀಶಾನಂದಜ್ಞಾನಸುಂದರ ತಿಳಿಸಿದರು.
ಅವರು ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿಕರವೇಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಸಂಘಟನೆಯ ಬಲವರ್ಧನೆ, ಮುಂದಿನ ಕಾರ್ಯಕ್ರಮಗಳು, ಹೋರಾಟದ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಂಪರ್ಕ ತಂತ್ರಗಳ ಕುರಿತು ಸುದೀರ್ಘಚರ್ಚೆ ನಡೆಸಿದರು. ಸಭೆಯಲ್ಲಿರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋ.ಪಾಟೀಲ ಹಾಗೂ ಜಿಲ್ಲೆಯ ಪ್ರಮುಖರು ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದರು. ಸಂಘಟನೆಯ ಶಕ್ತಿ ಹೆಚ್ಚಿಸಲು ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯಎಲ್ಲಾಗ್ರಾಮ ಘಟಕಗಳ ಸಂಘಟನಾ ಬಲ ಹೆಚ್ಚಿಸಲುಕಾರ್ಯತಂತ್ರರೂಪಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆಗೊಳಿಸಲಾಯಿತು. ಗೌರವಾಧ್ಯಕ್ಷರಾಗಿ ಶರಣಪ್ಪಚಂದನಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನಿಂಗಪ್ಪ ಮೂಗಿನ್, ಉಪಾಧ್ಯಕ್ಷರುಗಳಾಗಿ ಶಿವನಗೌಡ ಪಾಟೀಲ ಹಲಗೇರಿ, ಕಳಕಪ್ಪ ಹೂಗಾರ, ಸುರೇಶಗೌಡ ಪಾಟೀಲ, ಅನಿಲ ಬಿಜ್ಜಳ, ಸಹ ಕಾರ್ಯದರ್ಶಿಗಳಾಗಿ ಚಂದ್ರಶೇಖರ ಶೆಟ್ಟಿ, ಸಂಗಮೇಶ ಕಂದಕೂರ, ಸಂಘಟನಾ ಕಾರ್ಯದರ್ಶಿಗಳಾಗಿ ನೂರಪಾಶಾಕವಲೂರು, ಸಂಚಾಲಕರನ್ನಾಗಿ ಸಂಗಮೇಶ ಗುರಿಕಾರ, ಶರಣಯ್ಯ ಹಳೆಮನಿ, ಕಾನೂನು ಸಲಹೆಗಾರರನ್ನಾಗಿಖ್ಯಾತ ವಕೀಲರಾದ ವೈ ಜಯರಾಜ, ಕಾರ್ಯಕಾರಣಿ ಸದಸ್ಯರುಗಳಾಗಿ ಸಂಜಯಖಟವಟೆ, ಮಂಜುನಾಥಗೌಡ ಆನೆಗುಂದಿ, ಶರಣು ಮದಲಗಟ್ಟಿ, ಬಸವರಾಜ ದಳವಾಯಿ, ಪರಸಪ್ಪ ಅಳ್ಳಳ್ಳಿ, ಡಾ.ನಾಗರಾಜ ಚಳಗೇರಿ,ಎಮ್.ಡಿರಪಿ, ಬಸವರಾಜ ಮಾಂತಗೊಂಡ ಇವರುಗಳು ನೇಮಕವಾದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 