ಕಲಾ ಜಾಥಾ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ
District Collector flags off Kala Jatha mobile vehicle
ಹಾವೇರಿ 21: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾದ “ಕಲಾಜಾಥಾ” ಸಂಚಾರಿ ಪ್ರದರ್ಶನ ವಾಹನಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರು ಚಾಲನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಭಾರತಿ ಎಚ್., ಜನನಿ ಜಾನಪದ ಕಲಾ ವೇದಿಕೆ ತಂಡದ ಪರಶುರಾಮ ಬಣಕಾರ ಹಾಗೂ ಕಲಾವಿದರರು ಇತರರು ಉಪಸ್ಥಿತರಿದ್ದರು.
20 ಗ್ರಾಮಗಳಲ್ಲಿ ಪ್ರದರ್ಶನ: “ಕಲಾಜಾಥಾ” ಸಂಚಾರಿ ಪ್ರದರ್ಶನ ವಾಹನ ಜಿಲ್ಲೆಯ ಆಯ್ದ 20 ಗ್ರಾಮಗಳಲ್ಲಿ ಸಂಚಾರ ಮಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಕುರಿತು ವ್ಯಾಪರ ಪ್ರಚಾರ ನೀಡಲಿದೆ. ನ.21 ರಂದು ಹಾನಗಲ್ ತಾಲೂಕಿನ ಆಡೂರ, ಬಾಳಂಬೀಡ, ಅಕ್ಕಿಆಲೂರು, ಗೆಜ್ಜಿಹಳ್ಳಿ, ಶಿಗ್ಗಾಂವ ತಾಲೂಕು ಕುನ್ನೂರ, ಮಮದಾಪೂರ ಹಾಗೂ ಅಡವಿಸೋಮಾಪುರ ಗ್ರಾಮಗಳಲ್ಲಿ ಸಂಚಾರ ಮಾಡಲಿದೆ.
ನ.22 ರಂದು ಸವಣೂರ ತಾಲೂಕು ಹುರಳಿಕೊಪ್ಪಿ, ತೊಂಡೂರ, ಹೊಸಳ್ಳಿ, ಹಾವೇರಿ ತಾಲೂಕು ಆಲದಕಟ್ಟಿ, ಹೊಸಳ್ಳಿ, ಗೌರಾಪೂರ, ಕೂಳೇನೂರ, ಹಾವೇರಿ ತಾಲೂಕಿನ ಸಂಗೂರ, ದಿಡಗೂರ ಹಾಗೂ ನ.23 ರಂದು ಬ್ಯಾಡಗಿ ತಾಲೂಕಿನ ಕಾಗಿನೆಲೆ, ಇಂಗಳಗೊಂದಿ, ಘಾಳಪೂಜಿ ಹಾಗೂ ದುಮ್ಮಿಹಾಳ ಗ್ರಾಮಗಳಲ್ಲಿ “ಕಲಾಜಾಥಾ” ಸಂಚಾರಿ ಪ್ರದರ್ಶನ ವಾಹನ ಸಂಚರಿಸಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 