ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಬ್ಯಾಂಕರ್ಸ್‌ ಪ್ರಗತಿ ಪರೀಶೀಲನಾ ಸಭೆ

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಬ್ಯಾಂಕರ್ಸ್‌ ಪ್ರಗತಿ ಪರೀಶೀಲನಾ ಸಭೆ District Bankers' progress review meeting held at the Zilla Panchayat Hall

ಧಾರವಾಡ ಸೆ.23:  ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಿನ್ನೆ (ಸೆ.22) ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆಯು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 

 ರಾಜ್ಯ ಮತ್ತು ಕೇಂದ್ರ ಸಹಾಯಧನ, ಸಾಲಗಳ ಶೀಘ್ರ ವಿತರಣೆ, ಸಾಮಾಜಿಕ ಭದ್ರತೆ ಅಭಿಯಾನದಡಿ ಪಿಎಮ್‌ಜೆಜೆಬಿವಾಯ್ ಮತ್ತು ಪಿಎಮ್‌ಎಸ್‌ಬಿವಾಯ್ ಯೋಜನೆಗಳಲ್ಲಿ ಜಿಲ್ಲೆಯ ಎಲ್ಲಾ ಅರ್ಹ ಜನರ ಸಂಪೂರ್ಣ ಸೆರೆ​‍್ಡಯಾಗಬೇಕು ಮತ್ತು ಕಡಿಮೆ ಸಿಡಿ ಅನುಪಾತ ಹೊಂದಿರುವ ಬ್ಯಾಂಕುಗಳಿಗೆ ಆದ್ಯತೆ ಕ್ಷೇತ್ರವಾದ ಸಾಲ ವಿತರಣೆಯಲ್ಲಿ ಒತ್ತು ನೀಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಸೂಚಿಸಿದರು. 

ಸಭೆಯಲ್ಲಿ ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಬಸವರಾಜ ಗಡಾದವರ, ಬ್ಯಾಂಕ್ ಆಫ್ ಬರೋಡಾ ಉಪ-ಪ್ರಾದೇಶಿಕ ವ್ಯವಸ್ಥಾಪಕ ಎಜಿಎಮ್ ಅಮರೇಶ್ ಗೌಡ, ಆರ್‌.ಬಿ.ಐ ಎಜಿಎಮ್ ಬುಬುಲ್ ಬೊರ್ಲೋಯಿ, ನಾಬಾರ್ಡ್‌ ಎಜಿಎಮ್ ಮಯೂರ್ ಕಾಂಬಳೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಜಿಎಮ್ ಮತ್ತು ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ, ಧಾರವಾಡ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ಮಟ್ಟದ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.