ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಠ್ಯಪುಸ್ತಕ ವಿದ್ಯಾಭ್ಯಾಸಕ್ಕಾಗಿ ಸಾಮಗ್ರಿಗಳ ವಿತರಣೆ
Distribution of uniforms, textbooks, and educational materials to poor students
ಯಮಕಣಮರಡಿ 30 : ಸ್ಥಳೀಯ ಹುಣಸಿಕೋಳ ಮಠ ದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಸವ ಮಕ್ಕಳಿಗೆ ದಿನಾಂಕ. 28/6/2025 ರಂದು ಬೆಂಗಳೂರಿನ ವಿಧಿ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರು ಶ್ರೀಮಠಕ್ಕೆ ಭೇಟಿ ನೀಡಿ ಸುಮಾರು 18ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಸಮ ವಸ್ತ್ರ ಪಠ್ಯಪುಸ್ತಕ ವಿದ್ಯಾಭ್ಯಾಸಕ್ಕಾಗಿ ಸಾಮಗ್ರಿಗಳು ವಿತರಣೆ ಮಾನವೀಯತೆಗೆ ಸಾಕ್ಷಿಯಾದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮಠದ ಪೂಜ್ಯರಾದ ಸಿದ್ದ ಬಸವ ದೇವರು ಮಾತನಾಡುತ್ತಾ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಇಂಥ ಸಂಸ್ಥೆಗಳು ಮುಂದೆ ಬಂದರೆ ಬಡ ವಿದ್ಯಾರ್ಥಿಗಳಿಗೆ ಆಲದಮರದ ನೆರಳಿನಂತೆ ನೆರಳಾಗುತ್ತಾರೆ ಅಲ್ಲದೆ ಇಂದಿನ ವಿದ್ಯಾರ್ಥಿಗಳೇ ನಾಡಿನ ಪ್ರಜೆಗಳಾಗಲು ದಾರೀದೀಪವಾಗುತ್ತದೆ ಎಂದು ಹೇಳಿದರು ಶ್ರೀ ಚೇತನ್ ಗುಂಡಕಲ್ಲಿ ಮಠ ಅವರು ಸಹ ದಾನ ಧರ್ಮಗಳ ಬಗ್ಗೆ ಬಸವಣ್ಣರ ವಿಚಾರ ಬಗ್ಗೆ ವಿದ್ಯಾರ್ಥಿಗಳೇ ತಿಳಿಪಡಿಸಿದರು ಕಾರ್ಯಕ್ರಮದಲ್ಲಿ ಸ್ಥಳೀಯ ಶಿಕ್ಷಣ ಸಂಸ್ಥೆಗಳ ಶಿಕ್ಷಕರುಗಳಾದ ಬಸವರಾಜ್ ಹಿರೇಮಠ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಗೀರೀಶ ಮಿಸ್ರಿ ಕೋಟಿ ಯುವ ಧುರೀಣರಾದ ಶ್ರೀ ಕಿರಣ್ ಸಿಂಗ್ ರಜಪೂತ ಶ್ರೀಮಠದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿರೂಪಣೆ ಎಸ್ ಆರ್ ತಬರಿ ನಡೆಸಿಕೊಟ್ಟರು ಎಲ್ಲರನ್ನು ಸ್ವಾಗತಿಸಿದರು. ಜಿಎಸ್ ಹೊನ್ನೂರಿಗೆ ಸರ್ ಎಲ್ಲರನ್ನು ವಂದಿಸಿದರು ಅಪಾರರ್ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 