ಕಾಗವಾಡ: ಜಾನುವಾರಗಳಿಗೆ ಇಪ್ಪತ್ತು ಟನ್ ಮೇವು ವಿತರಣೆ
ಲೋಕದರ್ಶನ ವರದಿ
ಕಾಗವಾಡ 19: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಕಾಗವಾಡ ತಾಲೂಕಿನ ಉಗಾರ ಸೇರಿದಂತೆ ಇನ್ನೂಳಿದ ಕಾಳಜಿ ಕೇಂದ್ರಗಳಲ್ಲಿ ಸ್ಥಳಾಂತರಿಸಿದ ಜಾನುವಾರಗಳಿಗೆ 20 ಟನ್ ಮೇವು ವಿತರಿಸಲಾಯಿತು.
ಕಾಗವಾಡ ತಾಲೂಕಿಗೆ ಸಿಂದನೂರ ತಾಲೂಕಿನ ವಿರಪಾಪೂರ ಗ್ರಾಮ ಹಾಗೂ ಹಟ್ಟಿ ಗ್ರಾಮಸ್ಥರ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಚಾಲಿತ ನೆರೆ ಸಂತ್ರಸ್ತ ಪರಿಹಾರ ಸಮಿತಿ ಅಥಣಿ ಹಾಗೂ ಕಾಗವಾಡ ಇವರಿಂದ 3 ಲಾರಿಗಳಷ್ಟು ಸುಮಾರು 20 ಟನ್ನದಷ್ಟು ಜೋಳ ಹಾಗೂ ಭತ್ತದ ಒಣ ಮೇವುಪೂರೈಸಿದರು.
ಸಂತ್ರಸ್ಥ ಗ್ರಾಮಗಳಾದ ಕೃಷ್ಣಾ-ಕಿತ್ತೂರ, ಬಣಜವಾಡ, ಕಾತ್ರಾಳ, ಐನಾಪೂರ(ಹುನಚಿಕೋಡಿ) ಹಾಗೂ ಉಗಾರ-ಖುರ್ದ ಒಟ್ಟು 16 ಗಂಜಿ ಕೇಂದ್ರಗಳ ಜಾನುವಾರುಗಳಿಗೆ ಪೂರೈಸಲಾಯಿತು ಎಂದು ಆರ್.ಎಸ್.ಎಸ್. ಕಾರ್ಯಕರ್ತ ಅನೀಲ ನಾವಿಲಗೇರ ಹೇಳಿದರು.
ಅವರೊಂದಿಗೆ ಯೋಗೇಶ ಕುಂಬಾರ, ವಿಕಾಸ ಗಿಜವನೆ, ಸಚೀನ ಶಿಂದೆ, ರಮೇಶ ಬೋಗಿ, ಅಜೀತ ಭೋಸಲೆ ಹಾಗೂ ಇನ್ನೂಳಿದ ಎಲ್ಲ ಸಂಘದ ಸದಸ್ಯರು ಮೇವು ಪೂರೈಸಲು ಸಹಕರಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 