ರೈತರ ಅನುಕೂಲತೆಗಾಗಿ ಸಬ್ಸಿಡಿ ಹಣದಲ್ಲಿ ಟ್ರ್ಯಾಕ್ಟರ ವಿತರಣೆ
Distribution of tractors with subsidized funds for the benefit of farmers
ಜಮಖಂಡಿ 19: ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಕಬ್ಬು ಬೆಳೆಗಾರರು ಹೆಚ್ಚು ಇರುವರು ಹಾಗೂ ಇನ್ನಿತರ ಬೆಳೆಯುವ ರೈತರು ಇದ್ದಾರೆ. ಅವರಿಗೆ ಗ್ರಾಹಕರ ಸೇವಾ ಅಧಿಕಾರ ಒಆರ್ಜಿ, ವತಿಯಿಂದ ರೈತರಿಗೆ ಅನುಕೂಲತೆಗಾಗಿ ಸಬ್ಸಿಡಿ ಹಣದಲ್ಲಿ ಟ್ರ್ಯಾಕ್ಟರಗಳನ್ನು ನೀಡಲಾಗುತ್ತದೆಂದು ಗ್ರಾಹಕರ ಸೇವಾ ಅಧಿಕಾರ ಒಆರ್ಜಿ. ರಾಜ್ಯಾಧ್ಯಕ್ಷ ರಾಜು ಗಸ್ತಿ ಹೇಳಿದರು.
ನಗರದ ಜಂಬಗಿ ರಸ್ತೆಯ ಹತ್ತಿರ ಇರುವ ಗ್ರಾಹಕರ ಸೇವಾ ಅಧಿಕಾರ ಒಆರ್ಜಿ. ಕರ್ನಾಟಕ ರಾಜ್ಯ ಪ್ರಧಾನ ಕಚೇರಿ ಆವರಣದಲ್ಲಿ ರೈತರಿಗೆ ನಾಲ್ಕು ಟ್ರ್ಯಾಕ್ಟರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ರೈತರು ಟ್ರ್ಯಾಕ್ಟರಗಳನ್ನು ಪಡೆಯಲು ಮೂಲ ದಾಖಲಾತಿಗಳನ್ನು ಸಲಿಸಿದರೆ. ಅವುಗಳನ್ನು ಕೇಂದ್ರ ಪ್ರಧಾನ ಕಚೇರಿಗೆ ರವಾನಿಸಲಾಗುತ್ತದೆ. ಸರಕಾರದಿಂದ ಮಂಜೂರಾತಿ ಪಡೆದ ರೈತರಿಗೆ ಟ್ರ್ಯಾಕ್ಟರಗಳನ್ನು ಹಸ್ತಾಂತರ ಮಾಡುವುದು. ಇದರಿಂದ ಈ ಭಾಗದ ರೈತರಿಗೆ ಅನುಕೂಲತೆ ಆಗುತ್ತದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು. ಇವಾಗ ಮಂಜೂರಾತಿಯಾದ ನಾಲ್ಕು ಟ್ರ್ಯಾಕ್ಟರಗಳನ್ನು ವಿತರಣೆಯನ್ನು ಮಾಡಲಾಗಿದೆ ಎಂದರು.
ಚಿಮ್ಮಡ ಗ್ರಾಮದ ನಾಲ್ಕು ರೈತರಿಗೆ ಮಂಜೂರಾತಿಯಾದ ಪಲಾನುಭವಿಗಳಾದ ಧರೇಪ್ಪ ಬ್ಯಾಕೋಡ, ಶ್ರೀಕಾಂತ ಕೌಟಿ, ಮಾನಿಂಗ ಯಲ್ಲಪ್ಪ ಹಳ್ಳಿಮನಿ, ಕಲ್ಲನಗೌಡ ಪಾಟೀಲ ಅವರಿಗೆ ಸರಕಾರದಿಂದ ಮಂಜೂರಾತಿಯಾದ ನಾಲ್ಕು ಟ್ರ್ಯಾಕ್ಟರಗಳನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಕೃಷ್ಣಾ ಜಾಧವ, ಅನೀಲ ಜಾಧವ, ಸದಾಶಿವ ನ್ಯಾಮಗೌಡ, ಮುತ್ತಣ್ಣ ಮೇತ್ರಿ, ಪರುಶರಾಮ ವಾಳ್ಳೆನ್ನವರ, ಮೀರಾ ಒಂಟಮೋರೆ, ಅಕ್ಬರ್ ಜಮಾದಾರ, ಯಲ್ಲಪ್ಪ ತಳಗೇರಿ, ಪ್ರೇಮ ಬಳೋಲಗಿಡದ ಸೇರಿದಂತೆ ಅನೇಕರು ಟ್ರ್ಯಾಕ್ಟರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 