ಕ್ಷೇತ್ರದ ಅಲೆಮಾರಿ ಕುಟುಂಬಗಳಿಗೆ ತಾಡ್ಪಾಲ್ ವಿತರಣೆ
Distribution of tadpal to the nomadic families of the area
ಕಂಪ್ಲಿ 19: ಕುರುಗೋಡು ಪಟ್ಟಣದಲ್ಲಿ ಕಂಪ್ಲಿ ಕ್ಷೇತ್ರದ ಅಲೆಮಾರಿಯ ಎಸ್ಸಿ, ಎಸ್ಟಿ ಜನಾಂಗದ ಕುಟುಂಬಗಳಿಗೆ ತಾಡ್ಪಲ್ಗಳನ್ನು ಶಾಸಕ ಜೆ.ಎನ್.ಗಣೇಶ್ ಬುಧವಾರ ವಿತರಿಸಿದರು. ನಂತರ ಶಾಸಕ ಗಣೇಶ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಲೆಮಾರಿ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದು, ಟೆಂಟ್ಗಳಲ್ಲಿ ಮಳೆ, ಚಳಿಗಾಲದಲ್ಲಿ ಸುರಕ್ಷತೆ ಇಲ್ಲದ ಪರಿಣಾಮ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಆದ್ದರಿಂದ ಇವರ ಸಂಕಷ್ಟವನ್ನು ಗಮನಿಸಿ, ಮಳೆ, ಚಳಿ ಸಂದರ್ಭದಲ್ಲಿ ಟೆಂಟ್ಗಳಲ್ಲಿ ತಾಡ್ಪಾಲ್ ಹಾಕಿಕೊಂಡು, ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎನ್ನುವ ಹಿತದೃಷ್ಟಿಯಿಂದ ಇಲ್ಲಿನ ಕುಟುಂಬಗಳಿಗೆ ಸರ್ಕಾರದಿಂದ ಬಂದಂತಹ ಉಚಿತ ತಾಡ್ಪಾಲ್ಗಳನ್ನು ವಿತರಿಸಿದ್ದು, ಇದರ ಬದುಪಯೋಗದೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು.
ಕಂಪ್ಲಿ ಕ್ಷೇತ್ರದ ಹಕ್ಕಿಪಿಕ್ಕಿ ಸಿಂಧೋಳ್, ಡೊಂಗ್ರಿಗರಾಶಿಯ ಶಿಳೆಕ್ಯಾತ ಸುಡುಗಾಡು ಸಿದ್ಧ, ಬುಡಗ ಜಂಗಮ, ಹಂಡಿ ಜೋಗಿ ಮತ್ತು ಇತರ ಅಲೆಮಾರಿ ಜಾತಿಗಳಿಗೆ ವಿತರಣ ಮಾಡಿ ಮುಂದಿನ ದಿನಗಳಲ್ಲಿ ಸರ್ಕಾರವತಿಯಿಂದ ನಿವೇಶನ ಜೊತೆಗೆ ಮನೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಲೆಮಾರಿ ಮುಖಂಡರುಗಳಾದ ಅಲೆಮಾರಿ ಅರೆಅಲೆಮಾರಿ ಮಹಾಸಭಾ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಎಚ್.ಪಿ ಶಿಕಾರಿ ರಾಮು, ಹನುಮಂತಪ್ಪ, ಜೋಗಿ ಸುಂಕಪ್ಪ, ಹಂಡಿಜೋಗಿ, ಹುಲುಗಪ್ಪ, ಸುಡುಗಾಡು ಸಿದ್ದ ಸೇರಿದಂತೆ ಅಲೆಮಾರಿ ಮುಖಂಡರು, ಮಹಿಳೆಯರು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 