ಅಣ್ಣಪ್ಪ ಪೂಜಾರಿಕರ್ತವ್ಯಕ್ಕೆ ಅಡ್ಡಿ: ಕೆಆರ್ಎಸ್ ಪಕ್ಷದ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಬಂಧನ
Disruption to Annappa Pujari's duties: KRS party president Annappa Pujari arrested
ಚಡಚಣ 29 : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಪ್ತಾ ವಸೂಲಿಗೆ ಬೇಡಿಕೆ ಇಟ್ಟಿದ್ದ ಚಡಚಣ ಕೆ.ಆರ್.ಎಸ್ ಪಕ್ಷದ ಚಡಚಣ ನಗರ ಘಟಕದ ಅಧ್ಯಕ್ಷ, ರೌಡಿ ಸೀಟರ್ ಅಣ್ಣಪ್ಪ ಪೂಜಾರಿ ಅವರ ಮೇಲೆ ಸ್ಥಳಿಯ ಬಿಇಓ ಕಚೇರಿ ಡಿ.ದರ್ಜೆ ನೌಕರ ಅಶೋಕ ಕಟ್ಟಿಮನಿ ಹಾಗೂ ಶಿಕ್ಷಕ ಸಂಗಣ್ಣ ಪಾಟೀಲ ಅವರು ನೀಡಿದ ದೂರಿನ ಮೇಲೆ ಸ್ಥಳಿಯ ಪೋಲಿಸರು ಮಂಗಳವಾರ ರಾತ್ರಿ ಅಣ್ಣಪ್ಪ ಪೂಜಾರಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ ಸ್ಥಳಿಯ ಬಿಇಓ ಕಚೇರಿಯ ಡಿ.ದರ್ಜೆ ನೌಕರ ಅಶೋಕ ಕಟ್ಟಮನಿ ಎಂಬುವವರು ಕರ್ತವ್ಯದಲ್ಲಿದ್ದ ಸಮಯದಲ್ಲಿ ಕಚೇರಿಗೆ ಆಗಮಿಸಿದ ಅಣ್ಣಪ್ಪ ಪೂಜಾರಿ ಅನಗತ್ಯವಾಗಿ ಕಿರುಕಳ ನೀಡುವದಲ್ಲದೆ ಹಪ್ತಾ ನೀಡುವಂತೆ ಒತ್ತಾಯಿಸಿದ್ದಾನೆ. ಸ್ಥಳದಲ್ಲಿದ್ದ ಶಿಕ್ಷಕ ಸಂಗಣ್ಣ ಪಾಟೀಲ ಈ ಬಗ್ಗೆ ಪ್ರಶ್ನಿಸಿದಾಗ ಅವರ ಮೇಲೂ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 