ಯುವಕರಲ್ಲಿ ಶಿಸ್ತು, ಸಮಯಪ್ರಜ್ಞೆ ಅಗತ್ಯ: ನಿವೃತ್ತ ಯೋಧ

ಯುವಕರಲ್ಲಿ ಶಿಸ್ತು, ಸಮಯಪ್ರಜ್ಞೆ ಅಗತ್ಯ: ನಿವೃತ್ತ ಯೋಧ  Discipline and punctuality are essential among the youth: Retired soldier


ರಾಣೆಬೆನ್ನೂರು, ಆ.16: ದೇಶದ ಬೆನ್ನೆಲುಬಾಗಿರುವ ಯುವಜನತೆಯಲ್ಲಿ ದೇಶಾಭಿಮಾನ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ವಿಷಾದನೀಯ. ಯುವಕರಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಹೆಚ್ಚಬೇಕು ಎಂದು ನಿವೃತ್ತ ಯೋಧ ಪ್ರಕಾಶ್ ಬಿ. ಶೆಟ್ಟರ್ ಹೇಳಿದರು.  ನಗರದ ಅಂಚೆ ವೃತ್ತದ ಬಳಿಯ ಪ್ರಿಯದರ್ಶಿನಿ ಚಿಕ್ಕ ಉದ್ಯಮದಾರರ ಸಂಘದ ಆವರಣದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.  

ಯುವಕರು ದೇಶದ ಅಭಿವೃದ್ಧಿಗೆ ಸದಾ ಕೈಜೋಡಿಸಿದಾಗ ಮಾತ್ರ ಭಾರತ ಆರ್ಥಿಕವಾಗಿ ಹಾಗೂ ಸಮಗ್ರವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.  ಸಂಘದ ಅಧ್ಯಕ್ಷ ಮಿಥುನ್ ಟಿಕಾರೆ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿ.ಟಿ. ಸುರೇಶ, ನಿತ್ಯಾನಂದ ಕುಂದಾಪುರ, ಎ.ಬಿ. ಚಂದ್ರಶೇಖರ, ಪತ್ರಕರ್ತರಾದ ಎಂ. ಚಿರಂಜೀವಿ ಹಾಗೂ ಕೆ.ಎಸ್‌. ನಾಗರಾಜ್ ಮಾತನಾಡಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.