ಪ್ರಸಾದ ಸೇವೆಯಿಂದ ಉಳಿಯುತ್ತದೆ ಧರ್ಮ: ಸಿದ್ದಬಸವ ದೇವರು
Dharma is preserved through the service of Prasad: Siddha Basava Dev
ಯಮಕನಮರಡಿ 17: ಶ್ರಾವಣ ಮಾಸದ ಅಂಗವಾಗಿ ವಚನಾಮೃತ ಬೋಧೆ ಪ್ರವಚನ ಹಾಗೂ ವಿದ್ವಾಂಸರ ಉಪನ್ಯಾಸ ದಿ. 16ರಂದು ಶ್ರೀಮಠದಲ್ಲಿ ಉದ್ಘಾಟನೆ ಸಸಿಗೆ ನೀರಿರುವ ಮುಖಾಂತರ ಪ್ರಾರಂಭಗೊಳ್ಳಲಾಗಿತ್ತು.
ಬಸವಣ್ಣರ ವಚನ ಕುರಿತು ಸಿದ್ದ ಬಸವ ದೇವರು ಉತ್ತರಾಧಿಕಾರಿಗಳು ಮಾತನಾಡುತ್ತಾ ಇವತ್ತಿನ ಸಂದರ್ಭದಲ್ಲಿ ಪ್ರಸಾದ ಸೇವೆಯಿಂದ ಧರ್ಮ ಉಳಿಯುತ್ತದೆ. ವಚನಗಳಲ್ಲಿ ಅನುಭೋಗ ಇರುತ್ತದೆ. ಚಿಂತೆ ಎಲ್ಲರಲ್ಲಿ ಇರುತ್ತದೆ ಬಡತನದಲ್ಲಿ, ಸಂಸಾರದಲ್ಲಿ, ಹಸಿದ ಹೊಟ್ಟೆಯಲ್ಲಿ, ಗಂಡ, ಹೆಂಡತಿ, ಮಕ್ಕಳಲ್ಲಿ ಹಾಗೂ ಎಲ್ಲ ಕಡೆಗೆ ಚಿಂತೆ ಇರುತ್ತದೆ. 21 ದಿನ ಮಹಾರಾಜರ ಒಂದು ಕತೆ ತಿಳಿಸಿಕೊಟ್ಟರು.
ಆಗಿನ ಕಾಲದಲ್ಲಿ ಬಸವಣ್ಣನವರು ಆ ಮಹಾರಾಜರಿಗೆ ಆಶೀರ್ವಾದ ಮಾಡಿದರು. ನೀನು ಮುಟ್ಟಿದೆಲ್ಲ ಬಂಗಾರವಾಗುತ್ತದೆ. ಬಂಗಾರು ಸ್ಥಿರವಾಗಿರುವುದಿಲ್ಲ ಶ್ರಾವಣ ಮಾಸದಲ್ಲಿ ಕೇಳುವ ಭಕ್ತ ಇರಬೇಕು. ಸ್ವಾಮಿ ಕಡೆಗೆ ಜ್ಞಾನ, ನಡತೆ, ಒಳ್ಳೆಯದಾಗಿರಬೇಕು. ಧರ್ಮದ ಪ್ರಚಾರ ಮಾಡಬೇಕು. ದೇವರು ನಮ್ಮಲ್ಲಿ ಇರುತ್ತಾನೆ ಇಷ್ಟ ಲಿಂಗಳ ಬಗ್ಗೆ ತಿಳಿಸಿಕೊಟ್ಟರು. 100 ರಿಂದ 50 ಜನ ವಿದೇಶಿಯವರು ಲಿಂಗವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇಷ್ಟ ಲಿಂಗವೆಂದರೆ (ಜಂಗಮವಾಣಿ) ಅದರಲ್ಲಿ ವಿಶೇಷತೆಗಳನ್ನು ಸೂರ್ಯ ಕ್ರಾಂತಿ ಶಿಲೆ. ಚಂದ್ರಕಾಂತ ಶಿಲೆ. ಸೋಲಿಕಾರ್ಬನ್, ಎಡಗೈಯಲ್ಲಿ ಲಿಂಗ ಇಟ್ಟುಕೊಳ್ಳುವುದು ಮತ್ತು ದೇವ ಒಬ್ಬನು ನಾಮ ಹಲವು ಎಂದು ಹೇಳಿದರು.
ಮಠದ ಟ್ರಸ್ಟ್ ಕಮಿಟಿಯ ಸದಸ್ಯ ಸಿದ್ದಪ್ಪ ಶಿಳ್ಳಿ, ಅಶೋಕ್ ಮಾಲಕಾರ್, ಈರಣ್ಣ ಪಾವಟಿ, ದುಂಡಯ್ಯ ಮಠಪತಿ, ಮಹಾಲಿಂಗ ಕುಂಬಾರ್, ರಾಜು ಮಿಸ್ರಿಕೋಟಿ ಹಾಗೂ ಅಕ್ಕನ ಬಳಗದವರು ಮತ್ತೆ ಎಲ್ಲ ಯಮಕನಮರಡಿಯ ಸುತ್ತಮುತ್ತಲಿನ ಸದ್ಭಕ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 