ಕೆಎಚ್ಬಿ ನಗರಸಭೆಯ ಮನೆಗಳ ಕಾಮಗಾರಿ ಫ್ರಾರಂಭಕ್ಕೆ ಧರಣಿ ಉಪವಾಸ ಸತ್ಯಾಗ್ರಹ
Dharani, hunger strike to begin work on KHB municipal council houses
ಕೆಎಚ್ಬಿ ನಗರಸಭೆಯ ಮನೆಗಳ ಕಾಮಗಾರಿ ಫ್ರಾರಂಭಕ್ಕೆ ಧರಣಿ ಉಪವಾಸ ಸತ್ಯಾಗ್ರಹ
ಕಾರವಾರ 16 : ದಾಂಡೇಲಿಯಲ್ಲಿ ಕರ್ನಾಟಕ ರಾಜ್ಯ ಗೃಹ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಟ್ಟದೆ ಉಳಿದ 914 ಮನೆಗಳ ಕಾಮಗಾರಿ ಪ್ರಾರಂಭಿಸಲು , ಆಗ್ರಹಿಸಿ ದಾಂಡೇಲಿ ಸಮಗ್ರ ಅಭಿವ್ರದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ ನೇತೃತ್ವದಲ್ಲಿ ಸ್ಥಳೀಯ ನಗರ ಸಭೆ ಕಛೇರಿ ಬಳಿ ಡಾ.ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆ ಎದುರು ಸರದಿ ಧರಣಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿದೆ. ದಾಂಡೇಲಿಯ ಅಂಬೇವಾಡಿಯಲ್ಲಿ ಕಳೆದ 8 ವರ್ಷಗಳ ಹಿಂದೆ 1106 ಜಿ + 2 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಈ ನಿರ್ಮಾಣ ಕಾಮಗಾರಿ 12 ತಿಂಗಳಲ್ಲಿ ಬೆಂಗಳೂರಿನ ಗುತ್ತಿಗೆದಾರ ಕಂಪನಿ ಮುಗಿಸಿಕೊಡುವ ಭರವಸೆ ನೀಡಿತ್ತು . ಫಲಾನುಭವಿಗಳಿಗೆ ಮನೆಗಳನ್ನು 2020-21 ರಲ್ಲಿ ನೀಡಬೇಕಿತ್ತು. ಆದರೆ ಇದುವರೆಗೆ ಕೇವಲ 100 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ವಿತರಿಸಲಾಗಿದೆ . ನಂತರ 84 ಮನೆಗಳ ಕಾಮಗಾರಿ ಮುಗಿದಿದೆ. ಅದನ್ನು ಫಲಾನುಭವಿಗಳಿಗೆ ತಕ್ಷಣ ವಿತರಿಬೇಕು . ಬಾಕಿ 900 ಮನೆಗಳ ನಿರ್ಮಾಣ ಆಗಬೇಕೆಂದು ಧರಣಿ ನಿರತರು ಆಗ್ರಹಿಸಿದ್ದಾರೆ. ರಾಜ್ಯ ಗೃಹ ಮಂಡಳಿ 1106 ಫಲಾನುಭವಿಗಳಿಗೆ ಮನೆಗಳನ್ನು 2020-21 ವಿತರಿಸುವುದಾಗಿ ಹೇಳಿ ಫಲಾನುಭವಿಗಳಿಂದ 50 ರಿಂದ 70 ಸಾವಿರ ರೂಪಾಯಿ ಹಣ ಪಾವತಿಸಿಕೊಂಡಿತ್ತು. 12 ತಿಂಗಳ ನಂತರ ಮನೆ ಫಲಾನುಭವಿಗಳಿಗೆ ವಿತರಿಸುವ ಭರವಸೆನೀಡಿತ್ತು. ಆದರೆ 8 ವರ್ಷಗಳಾದರೂ ಮನೆ ನೀಡಿಲ್ಲ. ಒಟ್ಟೂ 53 ಕೋಟಿ ರೂಪಾಯಿ ವೆಚ್ಚದ 1106 ಮನೆಗಳ ನಿರ್ಮಾಣ ಕಾಮಗಾರಿಯ ಕೆಲಸ ಅರ್ಧದಷ್ಟು ಆಗದೇ ಇರುವಾಗಲೇ, ಗೃಹ ಮಂಡಳಿ ಅಧಿಕಾರಿಗಳ ಶಾಮೀಲಾತಿಯೊಂದಿಗೆ ಗುತ್ತಿಗೆದಾರ ಕಂಪನಿ 38 ಕೋಟಿ ಹಣ ಬಿಲ್ ಪಾವತಿಸಿಕೊಂಡಿದ್ದಾರೆ. ಈಗ ಕೆಲಸ ಮಾಡಲು ಹಣವಿಲ್ಲ. ಯೋಜನಾವೆಚ್ಚ ಹೆಚ್ಚಾಗಿದೆ ಎಂದು ಸಕಾ9ರದ ಅನುದಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆನ್ನಲಾಗಿದೆ. ಅಧಿಕಾರಿಗಳು, ಗುತ್ತಿಗೆದಾರ ಕಂಪನಿಯ ನಡುವೆ ಫಲಾನುಭವಿಗಳು ಸಾಲ ಮಾಡಿ ಸೂರಿಗಾಗಿ ಗೃಹ ಮಂಡಳಿಗೆ ಹಣ ಕಟ್ಟಿ ವಂಚನೆಗೊಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ನೊಂದ ಫಲಾನುಭವಿಗಳು ಹೋರಾಟಕ್ಕೆ ಇಳಿದಿದ್ದಾರೆ. ಸ್ಥಳೀಯ ಶಾಸಕ ದೇಶಪಾಂಡೆ , ನಗರಸಭೆ, ಗೃಹ ಮಂಡಳಿ ಧರಣಿ ಸ್ಥಳಕ್ಕೆ ಬಂದು ಸಮಸ್ಯೆ ಇತ್ಯರ್ಥಪಡಿಸುವವರೆಗೆ ಹೋರಾಟ ಮುಂದುವರಿಸಲಾಗುವುದೆಂದು ಹೋರಾಟದ ಮುಖಂಡ ಅಕ್ರಮಖಾನ್ ತಿಳಿಸಿದ್ದಾರೆ.....
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 