ಗೂಗಿಕಟ್ಟೆಯಲ್ಲಿರುವ ರಂಗಮಂದಿರದ ಕಟ್ಟಡಕ್ಕೆ ಉಪಸಭಾಧ್ಯಕ್ಷ ರುದ್ರ​‍್ಪ ಮಾನಪ್ಪ ಲಮಾಣಿ ಭೇಟಿ

ಗೂಗಿಕಟ್ಟೆಯಲ್ಲಿರುವ ರಂಗಮಂದಿರದ ಕಟ್ಟಡಕ್ಕೆ ಉಪಸಭಾಧ್ಯಕ್ಷ ರುದ್ರ​‍್ಪ ಮಾನಪ್ಪ ಲಮಾಣಿ ಭೇಟಿ Deputy Speaker Rudrapa Manappa Lamani visits the theatre building in Googikatte

ಹಾವೇರಿ 30: ನಗರದ ಜೆಪಿ ಸರ್ಕಲ್ ಹತ್ತಿರದ  ಗೂಗಿಕಟ್ಟೆಯಲ್ಲಿರುವ ರಂಗಮಂದಿರದ ಕಟ್ಟಡಕ್ಕೆ ಉಪಸಭಾಧ್ಯಕ್ಷ ರುದ್ರ​‍್ಪ ಮಾನಪ್ಪ ಲಮಾಣಿ ಭೇಟಿ ನೀಡಿ ಪರೀಶೀಲನೆ ನಡೆಸಿದರು.ಹಲವು ದಿನಗಳಿಂದ ರಂಗಮಂದಿರದ ಕಟ್ಟಡದಲ್ಲಿ ಯಾವುದೇ ಚಟುವಟಿಕೆಗಳು ನಡೆಯದೆ ಇರುವುದರಿಂದ ಈ ಕಟ್ಟಡ ಪಾಳು ಬಿದ್ದಂತಾಗಿದೆ ಕೂಡಲೇ ಈ ಕಟ್ಟಡದ ನಿರ್ವಹಣೆಯನ್ನು ಖಾಸಗಿ ಅವರಿಗೆ ನೀಡಿ ರಂಗಮಂದಿರದ ರಂಗಮಂದಿರದ ನಿರ್ವಹಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಟ್ಟಡದ ಪ್ರತಿಯೊಂದು ಮೂಲೆಯನ್ನು ಪರೀಶೀಲಿಸಿದ  ಉಪಸಭಾಧ್ಯಕ್ಷ ರುದ್ರ​‍್ಪ ಲಮಾಣಿ ಕಟ್ಟಡಕ್ಕೆ ಬೇಕಾದ ಅಗತ್ಯ ಮೂಲಭೂತ ಒದಗಿಸಲು ನನ್ನ ಅನುದಾನದಲ್ಲಿ ಹೆಚ್ಚಿನ ಅನುದಾನ ನೀಡುತ್ತೇನೆ .

ಕೂಡಲೇ ಕಟ್ಟಡದ ಕಾಮಗಾರಿಯನ್ನು  ವೈಜ್ಞಾನಿಕವಾಗಿ ಮರುಪರೀಶೀಲಿಸಿ ಸಿದ್ಧಗೊಳಿಸುವಂತೆ ತಿಳಿಸಿದರು.ಯಾರೋ ಕಿಡಿಗೇಡಿಗಳಿಂದ ರಂಗಮಂದಿರದ ಕಟ್ಟಡದ ಗ್ಲಾಸ್  ಪುಡಿಪುಡಿ ಆಗಿರುವುದನ್ನು ಗಮನಿಸಿದ ಉಪಸಭಾಧ್ಯಕ್ಷರು ಕೂಡಲೇ ಇದನ್ನು ಸ್ವಚ್ಛಗೊಳಿಸಿ ಮುಂದೆ ಈ ರೀತಿ ಕಟ್ಟಡ ಹಾಳಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಗಳಿಗೆ ತಾಕೀತು  ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂಎಂ ಮೈದೂರ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹೇಶ ಕಲಾಲ ಸೇರಿದಂತೆ ಇತರ ಅಧಿಕಾರಿಗಳು  ಹಾಜರಿದ್ದರು.