ಪೊಲೀಸ್ ಪ್ರಶಿಕ್ಷಣಾಥರ್ಿಗಳ ನಿರ್ಗಮನ ಪಥ ಸಂಚಲನ

ಆಶೆ, ಆಮಿಷಗಳಿಗೆ ಬಲಿಯಾಗದಿರಿ: ಅಲೋಕ ಕುಮಾರ್

ಬಾಗಲಕೋಟೆ 02: ಪೊಲೀಸ್ ವೃತ್ತಿ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಸವಾಲುಗಳ ಜೊತೆಗೆ ಆಶೆ ಆಮಿಷಗಳು ಬರಲಿದ್ದು, ಆ ಆಮಿಷಗಳಿಗೆ ಬಲಿಯಾಗಬಾರದೆಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಅಲೋಕ ಕುಮಾರ ಪೊಲೀಸ್ ಪ್ರಶಿಕ್ಷಣಾಥರ್ಿಗಳಿಗೆ ಸಲಹೆ ನೀಡಿದರು.

ನವನಗರ ಪೊಲೀಸ್ ಪರೇಡ್ ಮೈದಾನಲ್ಲಿಂದು ಹಮ್ಮಿಕೊಂಡ 9ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾಥರ್ಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಅಪರಾಧ ಎಸಗಿ ಬಂದಿತರಾದ ಖೈದಿಗಳನ್ನು ನ್ಯಾಯಾಲಯ ಮತ್ತು ಆಸ್ಪತ್ರೆಗಳಿಗೆ ಕರೆದೊಯ್ಯುವ ವೇಳೆಯಲ್ಲಿ ಬಹಳಷ್ಟು ಅಪರಾಧಿಗಳು ಪರಾರಿಯಾಗುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಜೊತೆ ಕೈ ಜೋಡಿಸಿ ಪರಾರಿಯಾಗುವಲ್ಲಿ ಕಾರಣಿಬೂತರಾಗಿದ್ದಾರೆ. ಇದರಿಂದ ಇಲಾಖೆಗಳಿಗೆ ಕೆಟ್ಟ ಹೆಸರು ಬರುತ್ತಿದ್ದು, ನಿಮ್ಮ ಸೇವೆಯನ್ನು ಸಲ್ಲಿಸುವಾಗ ಅನೇಕ ಆಮಿಷಗಳು ಬರುತ್ತವೆ ಆ ಆಮಿಷಗಳಿಗೆ ಬಲಿಯಾಗಬಾರದೆಂದು ಸಲಹೆ ನೀಡುವದರದ ಜೊತೆಗೆ ಎಚ್ಚರಿಕೆ ಸಹ ನೀಡಿದರು.

ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಹೊಂದಿದ 116 ಜನ ಇಲಾಖೆಯ ಆಧಾರ ಸ್ತಂಭಗಳಾಗಿದ್ದು, ತಮ್ಮ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ತಮ್ಮ ಕುಟುಂಬ ಹಾಗೂ ಇಲಾಖೆಗೆ ಒಳ್ಳೆಯ ಹೆಸರು ತರುವ ಕೆಲಸ ಮಾಡಬೇಕು. 116 ಜನರಲ್ಲಿ 47 ಜನ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿದವರಾಗಿದ್ದು, ನಿಮ್ಮ ಕರ್ತವ್ಯದಲ್ಲಿ ಕಲಿಕೆ ನಿರಂತರವಾಗಿರಲಿ. ತರಬೇತಿ ಶಾಲೆಯಲ್ಲಿ ಒಳ್ಳೇಯ ತರಬೇತಿ ನೀಡಿದ್ದಾರೆ. ತಮ್ಮ ಮುಂದಿನ ಜೀವನದಲ್ಲಿ ಮಾನಸಿಕ, ದೈಹಿಕವಾಗಿ ಸದೃಡರಾಗಿ ಶಿಸ್ತು ಮತ್ತು ಸಜ್ಜನಿಕೆ ಹಾಗೂ ಸಂಯಮಕ್ಕೆ ಮಾದರಿಯಾಗಿಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಮಾತನಾಡಿ ದೈಹಿಕ, ಮಾನಸಿಕ ಮತ್ತು ಸಮತೋಲನೆಯ ಎಲ್ಲ ಆಯಾಮಗಳನ್ನು ದಾಟಿ ಆಯ್ಕೆಯಾಗಿ ಬಂದಿದ್ದು, ಇಂತಹ ಶ್ರಮಿಕ ತರಬೇತಿ ಪಡೆದು ಸಾಧನೆಗೈದು ಹೊರಹೊಮ್ಮಿದ ಪೊಲೀಸ್ ಪ್ರಶಿಕ್ಷಣಾಥರ್ಿಗಳು ಈ ಪರೇಡನಲ್ಲಿ ತಮ್ಮ ಚೈತನ್ಯ ಮರೆದಿದ್ದಿರಿ. ಶಾಂತ, ಸುವ್ಯವಸ್ಥೆಯನ್ನು ಪಾಲಿಸುವ ಬದ್ದತೆಯನ್ನು ಸಹ ತೋರಿಸಿದ್ದು, ಈ ಸೇವೆ ತಮಗಿರುವ ಸಮರ್ಪಣಾ ಮನೋಭಾವ ಕೂಡ ವ್ಯಕ್ತಪಡಿಸಿದೆ. ತಮ್ಮ ಉನ್ನತ ವ್ಯಾಸಂಗದ ನಂತರವು ಇಂತಹ ಸೇವೆಗೆ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ತಿಳಿಸಿದರು. 

ಡಿವೈಎಸ್ಪಿ ಎಸ್.ಬಿ.ಗಿರೀಶ ತರಬೇತಿ ಶಾಲೆಯ ವರದಿ ವಾಚನ ಮಾಡಿದರು. ಇದೇ ಸಂದರ್ಭದಲ್ಲಿ 9ನೇ ತಂಡದ ಪ್ರಶಿಕ್ಷಣಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾರಂಭದಲ್ಲಿ ಮುಖ್ಯ ಅತಿಥಿಗಳಿಂದ ತಂಡಗಳ ಪರಿವೀಕ್ಷಣೆ, ನಿಧಾನ ಹಾಗೂ ತ್ವರಿತ ಗತಿಯ ಪಥಸಂಚಲನ, ಗೌರವ ವಂದನೆ, ಧ್ವಜಗಳ ಆಗಮನ, ಪೊಲೀಸ್ ಬ್ಯಾಂಡ್ನಿಂದ ರಾಷ್ಟ್ರಗೀತೆ, ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಒಳಾಂಗಣ ಮತ್ತು ಹೊರಾಂಗಣ ಬೋಧಕರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ಸ್ವಾಗತಿಸಿದರು. ಸಂಜೀವ ಕಾಂಬಳೆ ವಂದಿಸಿದರು. ಜಾಸ್ಮಿನ್ ಕಿಲ್ಲೇದಾರ ನಿರೂಪಿಸಿದರು.