ಇಂಡಿ ತಾಲೂಕಿನ ಗ್ರಾಮಗಳ ಕಾಲುವೆಗೆ ನೀರು ಹರಿಸಲು ಆಗ್ರಹ
Demand to release water to canals in villages of Indi taluk
ವಿಜಯಪುರ 02 : ಚಡಚಣ ಹಿಇಂಡಿ ತಾಲೂಕಿನ ಮಣಂಕಲಗಿ, ಏಳಗಿ, ಕೆರೂರ, ತದ್ದೆವಾಡಿ, ಹಲಸಂಗಿ, ಉಮ್ರಾಣಿ, ಲೋಣಿ ಬಿ.ಕೆ., ಸೇರಿದಂತೆ ಈ ಹಳ್ಳಿಗಳಲ್ಲಿ ಹಾದು ಹೋಗುವ ಇಂಡಿ ಉಪ ಕಾಲುವೆಯ 35,36 ನಂಬರ್ ಗೆ ಇಲ್ಲಿಯವರೆಗೆ ನೀರು ಬರುತ್ತಿಲ್ಲ, ಇದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಕೂಡಲೇ ಈ ಕಾಲುವೆ ಮೂಲಕ ನೀರು ಹರೆಸಿ ಕೊನೆಯ ಭಾಗದ ರೈತರಿಗೆ ನೀರು ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಕಳೆದ ವರ್ಷ 46 ಡಿಗ್ರಿ ಸೆಲ್ಸಿಯಸ್ ಬಿಸಿಲು ಆಗಿದ್ದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ, ಈ ವರ್ಷ ಪ್ರೆಬ್ರುವರಿಯಲ್ಲಯೇ ಅತೀ ಹೆಚ್ಚು ಬಿಸಿಲು ಕಾಣುವಂತಾಗಿದೆ, ಈ ಭಾಗದ ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಬೇಕಾದರೆ ಈ ಕಾಲುವೆ ಮೂಲಕ ನೀರು ಹರೆಸಬೇಕು, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಬೇಜವ್ದಾರಿಯಿಂದ ನೀರು ಬಂದಿಲ್ಲ, ಈ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.
ಕೂಡಲೇ ತಾವೂ ವಿಶೇಷ ಗಮನ ಹರೆಸಿ ಈ ಭಾಗದ ರೈತರಿಗೆ, ಜಾನುವಾರುಗಳಿಗೆ ನೀರು ದೊರಕಿಸಿಕೊಡಬೇಕು ಎಂದು ಈ ಮೂಲಕ ತಮ್ಮಲ್ಲಿ ಸಮಸ್ತ ರೈತ ಬಾಂಧವರಿಂಧ ಮನವಿ ಮಾಡಿಕೊಳ್ಳುತ್ತೆವೆ, ಇಲ್ಲವಾದಲ್ಲಿ ಮಾರ್ಚ 15 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಉಗ್ರ ಮಾಡಲಾಗುವುದು ಎಂದು ಈ ಮೂಲಕ ತಿಳಿಸುತ್ತೆವೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ, ಮುಖಂಡರಾದ ಮಹಾದೇವ ಬನಸೋಡೆ, ಸಂಗಪ್ಪ ಟಕ್ಕೆ, ದಯಾನಂದ ಕೋಳಿ, ಸಂದೀಪ ಬೆಳ್ಳಿ, ಮಾಳಪ್ಪ ಬುಗದಡ್ಡಿ, ವಿಠ್ಠಲಗೌಡ ಪಾಟೀಲ್, ಪಂಚಯ್ಯ ಮಠ, ರಾಯಗೊಂಡ್ ರಾಘಟೆ, ಸಿದ್ದರಾಯ ಮೇತ್ರಿ, ಶಂಕರ ವಡ್ರೆ, ದಸಗೀರ ವಾಲಿಕಾರ, ರಾಮಗೊಂಡ ಮಾದಭಾವಿ, ಧರೆಪ್ಪ ಉಪ್ಪಾರ, ಸಿದ್ದರಾಮ ಕಟ್ಟಿಮನಿ, ಮಲ್ಲು ಮೇತ್ರಿ , ಸೋಮು ಮಾಧಭಾವಿ, ಸಂತೋಷ ನಿವರಗಿ, ರಾಮಚಂದ್ರ ಕೋಳಿ, ಭೀಮಾಶಂಕರ ಹೂಗಾರ , ದರ್ಶನ್ ಹೊಸಮನಿ, ಸೂರ್ಯಕಾಂತ ಆಳೂರ್, ಸಂಜೀವ್ ಶಿರಹಟ್ಟಿ, ಈರಣ್ಣ ಮೇತ್ರಿ, ಆನಂದ ಮಧಭಾವಿ, ಸೇರಿದಂತೆ ಮಣಂಕಲಗಿ, ಮರಗುರ, ಹಲಸಂಗಿ, ಧೂಳಖೇಡ, ಏಳಗಿ ಪಿ. ಎಚ್, ಗ್ರಾಮದ ರೈತರು ಇದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 