ತೊಗರಿ ಖರಿಧಿ ಕೇಂದ್ರ ಜೂನ 10 ರವರೆಗೆ ಮುಂದುವರೆಸಲು ಆಗ್ರಹ
Demand to continue the Togari Purchasing Center till June 10
ಲೋಕದರ್ಶನ ವರದಿ
ವಿಜಯಪುರ 14: ಹಲವಾರು ಗೊಂದಲದಿಂದ, ಚೀಲ ಸಿಗದೇ, ಸೈಟ್ ಸಮಸ್ಯೆ, ಸರ್ವರ ಸಮಸ್ಯೆ ಎಂದು ನೆಪ ಹೇಳುತ್ತಾ ಜಿಲ್ಲೆಯಲ್ಲಿ ಹಲವಾರು ರೈತರು ತೊಗರಿ ಮಾರಾಟ ಮಾಡದೇ ಇಟ್ಟುಕೊಂಡಿದ್ದಾರೆ, ಈಗ ಅವಧಿ ಮುಗಿಯಿತು ಎಂದು ಹೇಳುತ್ತಾ ಇದ್ದಾರೆ, ಕೂಡಲೇ ಜಿಲ್ಲಾಧಿಕಾರಿಗಳು ಜೂನ 10 ರವೆಗೆ ತೊಗರಿ ಖರೀಧಿ ಕೇಂದ್ರವನ್ನು ಯಾವುದೇ ಸಮಸ್ಯೆ ಇಲ್ಲದ ಹಾಗೆ ಖರೀಧಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ಆಗ್ರಹ ಮಾಡಿದರು.
ಬೆಂಬಲ ಬೆಲೆಯೊಂದಿಗೆ ಖರೀಧಿ ಮಾಡಬೇಕಿರುವ ಪಿ.ಕೆ.ಪಿ.ಎಸ್ ಅಧಿಕಾರಿಗಳು ನಮಗೆ ಏನು ಸಂಬಂಧವೇ ಇಲ್ಲದಂತೆ ರೈತರೊಡನೆ ವರ್ತನೆ ಮಾಡುತ್ತಿದ್ದು, ಸಂಬಮಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮಾರ್ಗದರ್ಶನ ಮಾಡಿ ಸಾಧ್ಯವಿರುವ ಎಲ್ಲಾ ಕಡೆಗೆ ಖರೀಧಿ ಕೇಂದ್ರ ಆರಂಭಿಸಿದರೆ ನಷ್ಟಗೊಳ್ಳುವ ರೈತರು ಕನಿಷ್ಟ ಬೆಂಬಲೆ ಬೆಲೆಗಾದರೂ ಮಾರಾಟ ಮಾಡಿ ಸಾಲದಿಂದ ಸ್ವಲ್ಪನಾದರು ಬದುಕುಳಿಯುತ್ತಾರೆ.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 