ಪೊಲೀಸ್ ದೂರು ಪ್ರಾಧಿಕಾರಕ್ಕೆ ಪ್ರತಿ ಜಿಲ್ಲೆಯಿಂದ ನಾಗರಿಕ ಸಮಾಜದಿಂದ ಕನಿಷ್ಟ 5 ಜನ ಸದಸ್ಯರ ನೇಮಕ ಮಾಡಿಕೊಳ್ಳಲು ಆಗ್ರಹ

ಪೊಲೀಸ್ ದೂರು ಪ್ರಾಧಿಕಾರಕ್ಕೆ ಪ್ರತಿ ಜಿಲ್ಲೆಯಿಂದ ನಾಗರಿಕ ಸಮಾಜದಿಂದ ಕನಿಷ್ಟ 5 ಜನ ಸದಸ್ಯರ ನೇಮಕ ಮಾಡಿಕೊಳ್ಳಲು ಆಗ್ರಹ Demand to appoint at least 5 members from civil society from each district to the Police Complaints

ಲೋಕದರ್ಶನ ವರದಿ 

ವಿಜಯಪುರ 07 : ಪೊಲೀಸ್ ದೂರು ಪ್ರಾಧಿಕಾರದ ಜಿಲ್ಲಾ ಸಮಿತಿಗೆ ಕನಿಷ್ಟ 5 ಜನ ಸದಸ್ಯರ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿ ಆರ್‌. ಮಹಾದೇವ ಅವರ ಕಚೇರಿ ತೆರಳಿ ಪೊಲೀಸ್ ದೂರು ಪ್ರಾಧಿಕಾರ ಆಯ್ಕೆ ನಿಯೋಗದ ಸದಸ್ಯರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಕಾಸೌಧದ ಹಮ್ಮಿಕೊಂಡ ಸಭೆಯನ್ನು ಉದ್ದೇಶಿಸಿ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ನಾಗರಿಕ ಸಮಾಜಕ್ಕೆ ನ್ಯಾಯಸಿಗಬೇಕಾದರೆ ಒಬ್ಬರನ್ನೆ ತೆಗೆದುಕೊಂಡರೆ ನೊಂದವರಿಗೆ ನ್ಯಾಯ ಸಿಗುವುದು ದೂರದ ಮಾತಾಗಿದೆ. ಆದ್ದರಿಂದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 5 ಜನ ನಾಗರಿಕ ಸಮಾಜವನ್ನು ತೆಗೆದುಕೊಳ್ಳಬೇಕು ಮಾನ್ಯ ಮುಖ್ಯಮಂತ್ರಿಗಳಿಗೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಸಭೆ ಮೂಲಕ ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಪರಶುರಾಮ ಶಿವಶರಣ ಮಾತನಾಡಿ, ರಾಜ್ಯದಲ್ಲಿ ತುಳಿತಕ್ಕೆ ಒಳಗಾದ ಶೋಷಿತ, ದಲಿತ ಹಿಂದುಳಿದ, ಅಲ್ಪಸಂಖ್ಯಾರಿಗೆ, ಧ್ವನಿ ಇಲ್ಲದವರಿಗೆ ನ್ಯಾಯ ಸಿಗಬೇಕಾದರೆ ಕನಿಷ್ಠ  5 ಜನರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಿಗಳಿಗೆ ನಾಗರೀಕ ಸೇವಾ  ಸಮಾಜದಿಂದ ಅರ್ಹ ಸದಸ್ಯರನ್ನು ಸಂದರ್ಶನ ಮಾಡಿರುವುದು ಸ್ವಾಗತಾರ್ಹ. ಆದರೆ ಪೊಲೀಸ್ ದೂರು ಪ್ರಾಧಿಕಾರದ  ಸಮಿತಿಗೆ ಜಿಲ್ಲಾ ವಾರು ನಾಗರಿಕ ಸಮಾಜದಿಂದ ಕೇವಲ ಓರ್ವ  ಸದಸ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದು ಸಮಂಜಸ ಅಲ್ಲ. ಆದ್ದರಿಂದ ಪ್ರತಿ ಜಿಲ್ಲೆಯಿಂದ ಜಿಲ್ಳಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಕನಿಷ್ಠ 5 ಜನರನ್ನು ಆಯ್ಕೆ ಮಾಡಿಕೊಳ್ಳಬೇಕು. ಏಕೆಂದರೆ, ಪೊಲೀಸ್ ಇಲಾಖೆ ಸಿಬ್ಬಂಧಿ ಅಧಿಕಾರಿಗಳಿಂದ  ದೌರ್ಜನ್ಯಕ್ಕೆ, ಅನ್ಯಾಯಕ್ಕೆ ಒಳಗಾದವರಿಗೆ  ನ್ಯಾಯ ದೊರಕಿಸಿ ಕೊಡುವುದು ದೂರದ ಮಾತು.  ಈ ಸಂದರ್ಭದಲ್ಲಿ ಹರಿಕೃಷ್ಣ ರಾವ, ಬಸರಾಜ ಮೈಸೂರು, ಸಬಿ ಐ.ಆರ್‌., ಎಂ. ಮಹದೇವಸಾಬ, ದೀಪಕ ಟಿ, ನಾಗರಾಜ ಆರ್‌., ಮಂಜು ಟಿ, ಶ್ರೇಯಶ ಕುಮಾರ, ಎಸ್‌. ಮಲ್ಲೇಶಪ್ಪ ಸೇರಿದಂತೆ ರಾಜ್ಯದ ಎಲ್ಲ 70 ಜನ ಉಪಸ್ಥಿತರಿದ್ದರು.