ಅತ್ಯಾಚಾರ ಮಾಡಿ ಕೊಲೆ ಮಾಡಿರುವ ದುಷ್ಕರ್ಮಿಗೆ ಗಲ್ಲು ಶಿಕ್ಷೆಗೆ ಒತ್ತಾಯ

ಅತ್ಯಾಚಾರ ಮಾಡಿ ಕೊಲೆ ಮಾಡಿರುವ ದುಷ್ಕರ್ಮಿಗೆ ಗಲ್ಲು ಶಿಕ್ಷೆಗೆ ಒತ್ತಾಯ Demand for death penalty for rapist and murderer

ಬಳ್ಳಾರಿ:ಜು 18ರಂದು ನಗರದಲ್ಲಿ ಕೊಪ್ಪಳ ಜಿಲ್ಲೆ ಮತ್ತು ತಾಲೂಕಿನ ಹೊಸಬಂಡಿ ಹರ್ಲಾಪುರ ಗ್ರಾಮದ ನಾಗಪ್ಪ ಮತ್ತು ರೇಣುಕಮ್ಮ ದಂಪತಿಗಳ ಮಗಳಾದ ಕುಮಾರಿ ಅರುಣಾ ಎಂಬ 14 ವರ್ಷದ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸಿ ಮತ್ತು ನೊಂದ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಸಿಳ್ಳೆ ಕ್ಯಾತಾಸ್ ಅಲೆಮಾರಿ ಸಮುದಾಯ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.  

ಸಿಳ್ಳೆ ಕ್ಯಾತಾಸ್ ಅಲೆಮಾರಿ ಸಮುದಾಯದ  ಅಧ್ಯಕ್ಷರು ಸುಬ್ಬಣ್ಣ ರವರು ಮಾತನಾಡಿ, ಆರೋಪಿಯನ್ನು ಬಂಧಿಸಿರುವದು ಸರಿ, ಅಷ್ಟೇ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ಹಾಗೂ ಇನ್ನೂ ಹೆಚ್ಚಿನ ಪ್ರಮಾಣ ಶಿಕ್ಷೆಯನ್ನು ವಿಧಿಸಿ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಹೆಣ್ಣು ಮಕ್ಕಳನ್ನು ಮುಟ್ಟಲು ಸಹ ಹೆದರಿಕೊಳ್ಳಬೇಕು ಅಂತಹ ಶಿಕ್ಷೆ ನೀಡಬೇಕೆಂದು ಹೇಳಿದರು. ನಂತರ ಕರ್ನಾಟಕ ರಾಜ್ಯ ಕಾರ್ಮಿಕ ಶಕ್ತಿ ರಾಜ್ಯಾಧ್ಯಕ್ಷರು  ಎಸ್‌.ದೇವಾನಂದ ಕುಮಾರ್ ರವರು ಮಾತನಾಡಿ,ನಾಗಪ್ಪ ಮತ್ತು ರೇಣುಕಮ್ಮ ಶಿಕ್ಷಣ ವಂಚಿತ ಕುಟುಂಬವು ಬಡವರು ನಿರ್ಗತಿಕರು ಅಲೆಮಾರಿ ಸಮುದಾಯಕ್ಕೆ ಸೇರಿದ ಪರಿಶಿಷ್ಟ ಜಾತಿ ಸಿಳ್ಳೆಕ್ಯಾತರಾಗಿರುತ್ತಾರೆ. ಒಂದು ಹೊತ್ತಿನ ಊಟಕ್ಕೂ ಸಹ ಶ್ರಮಿಸುತ್ತಿರುವ ಕುಟುಂಬ ವಾಗಿರುತ್ತದೆ ಆದ್ದರಿಂದ ಮೃತಳ ಕುಟುಂಬಕ್ಕೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಕೇಂದ್ರ ಸರ್ಕಾರದ ನಿರ್ಭಯ ಪರಿಹಾರ ನಿಧಿಯಿಂದ ಮತ್ತು ಕರ್ನಾಟಕ ಸರ್ಕಾರದಿಂದ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಗರಿಷ್ಠ ಪರಿಹಾರ, ಕುಟುಂಬಕ್ಕೆ ಪಿಂಚಣಿ ಹಾಗೂ ಮೃತಳ ಕುಟುಂಬಕ್ಕೆ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಿಸಿ ಸಂತ್ರಸ್ತ ಕುಟುಂಬಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ನೆರವಾಗಬೇಕೆಂದು ತಿಳಿಸಿದರು.  

ಈ ಸಂದರ್ಭದಲ್ಲಿ ಎಚ್‌.ಎಸ್ ಸುಧಾಕರ್ ಹೆಗಡೆ, ಮಹೇಶ, ಯಲ್ಲಪ್ಪ ಸಿರಿಗೇರಿ ಕ್ರಾಸ್, ರಂಗಯ್ಯ, ರಾಮಾಂಜನಿ, ಶಂಕ್ರ​‍್ಪ, ತುಳಸಿ, ವಿಜಯಲಕ್ಷ್ಮಿ, ಆನಂದ, ಅಜ್ಜಪ್ಪ,ಸಮಸ್ತ ಪ್ರಗತಿಪರ ಮತ್ತು ಅಲೆಮಾರಿ ಸಂಘಟನೆಗಳು ದಲಿತ ಮುಖಂಡರು ಇತರರು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.