ಕೊಪ್ಪಳ ಪ್ರವಾಸಿ ಮಂದಿರದ ರಾಜಕೀಯ ಪ್ರೇರಿತ ಸಿಬ್ಬಂದಿಗಳ ಬದಲಾವಣೆಗೆ ಅಗ್ರಹ
ಕೊಪ್ಪಳ 29: ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿರುವ ಪ್ರವಾಸಿ ಮಂದಿರ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ನೌಕರರ ಪೈಕಿ ಬಹುತೇಕರು ರಾಜಕೀಯ ಪ್ರೇರಿತ ವ್ಯಕ್ತಿಗಳಂತೆ ವರ್ತಿಸುತ್ತಿರುವುದು ಕಂಡುಬಂದಿದೆ ಪ್ರವಾಸಿ ಮಂದಿರಕ್ಕೆ ಯಾರೇ ಬರಲಿ ಇವರು ಕೇವಲ ತಮಗೆ ವೇತನ ನೀಡುವ ತಮ್ಮ ಇಲಾಖೆಯ ಅಧಿಕಾರಿ ಗಳನ್ನು ಹೊರತುಪಡಿಸಿ ಉಳಿದವರನ್ನು ಕ್ಯಾರೆ ಮಾಡುವುದಿಲ್ಲ ಇವರಿಂದ ಸಿಗುವ ಒಂದೇ ಒಂದು ಉತ್ತರ ರೂಮ್ ಖಾಲಿ ಇಲ್ಲ ,ಜಿಲ್ಲಾಡಳಿತದ ಅಧಿಕಾರಿಗಳು ಎಲ್ಲಾ ರೂಮ್ ತೆಗೆದುಕೊಂಡಿರುತ್ತಾರೆ ಅಥವಾ ಪೊಲೀಸ ಇಲಾಖೆಯವರು ತೆಗೆದುಕೊಂಡಿದ್ದಾರೆ ಅಥವಾ ನ್ಯಾಯಾಲಯ ಇಲಾಖೆಯವರು ತೆಗೆದುಕೊಂಡಿದ್ದಾರೆ ಯಾರಿಗೆ ರೂಮ್ ಗಳಿಲ್ಲ, ಸ್ವಲ್ಪ ಫ್ರೆಶ್ ಅಪ್ ಆಗಿ ಹೋಗುತ್ತೇವೆ ಅವಕಾಶ ಕೊಡಿ ಎಂದರು ಅವಕಾಶ ನೀಡುವುದಿಲ್ಲ ತಾವೇ ಸುಪ್ರೀಂ ,ತಮ್ಮ ಮನೆ ಎಂಬಂತೆ ವರ್ತನೆ ಮಾಡುತ್ತಾರೆ ಯಾಕೆ ಎಂದು ಪ್ರಶ್ನಿಸಿದರೆ ನಮಗೆ ಯಾರು ಏನು ಮಾಡಲಿಕ್ಕಾಗೋದಿಲ್ಲ ನಮ್ಮ ಜೊತೆ ಶಾಸಕರಿದ್ದಾರೆ ಸಂಸದರು ಇದ್ದಾರೆ ಎಂದು ದರಿ್ದಂದ ಹೇಳುತ್ತಾರೆ
ಇಂಥವರನ್ನು ಕೂಡಲೇ ಇಲ್ಲಿಂದ ಬಿಡುಗಡೆಗೊಳಿಸಬೇಕು ಬೇರೆಯವರನ್ನು ಖಾಯಂ ನೌಕರ ಸಿಬ್ಬಂದಿ ಗಳನ್ನು ಆ ಜಾಗದಲ್ಲಿ ನಿಯೋಜಿಸಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಪ್ರಜ್ಞಾವಂತ ನಾಗರಿಕರು ಹೋರಾಟಗಾರರು ವಿವಿಧ ಜನಪರ ಸಂಘಟನೆಗಳ ಪ್ರತಿನಿಧಿಗಳು ತಮ್ಮ ಕೆಲಸ ಕಾರ್ಯಗಳಿಗಾಗಿ ಬೇರೆ ಊರಿಂದ ಬಂದಿರುವ ಮಾಧ್ಯಮದವರು ನಿವೃತ್ತಿ ನೌಕರರು ಸಂಘಟನೆಗಳ ಮುಖ್ಯಸ್ಥರು ಸೇರಿ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಲು ನಿರ್ಧರಿಸಿದ್ದಾರೆ, ಕೂಡಲೆ ಬದಲಾವಣೆ ಮಾಡಿ ಖಾಯಂ ನೌಕರ ಸಿಬ್ಬಂದಿಯನ್ನು ಅಥವಾ ಬೇರೆಯವರನ್ನ ನಿಯೋಜಿಸಬೇಕು ಪ್ರವಾಸಿ ಮಂದಿರಕ್ಕೆ ಬರುವರು ಯಾರೇ ಆಗಿರಲಿ ಅವರೊಂದಿಗೆ ಸೌಜನ್ಯದಿಂದ ವರ್ತಿಸುವಂತಹ ಸಿಬ್ಬಂದಿಗಳಿಗೆ ನೇಮಿಸಬೇಕೆಂದು ಜಿಲ್ಲೆಯ ಹಿರಿಯ ಸಮಾಜ ಸೇವಕ ನೀರ್ಗತಿಕ, ಶೋಷಿತ ಸಮುದಾಯಗಳ ಪಾಲಿನ ಸಂಜೀವಿನಿಯಾಗಿರುವ ಹಾಗೂ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ,ಅನಿಲ್ ಕುಮಾರ್ ಬೇಗಾರ್ ಆಗ್ರಹ ಪಡಿಸಿದ್ದಾರೆ,
ಸದರಿ ಸಮಸ್ಯೆಗಳನ್ನು ನಿವಾರಣೆ ಮಾಡದಿದ್ದಲ್ಲಿ ಮುಂಬರುವ ದಿನಗಳಲ್ಲಿ ಲೋಕೋಪಯೋಗಿ ಕಚೇರಿ ಮುಂದೆ ಅಥವಾ ಪ್ರವಾಸಿ ಮಂದಿರದ ಮುಂದೆ ಧರಣಿ ನಡೆಸಲಾಗುವುದು ಎಂದು ಡಾ, ಅನಿಲ್ ಕುಮಾರ್ ಬೇಗಾರ ಎಚ್ಚರಿಸಿದ್ದಾರೆ.