ದೇವರಹಿಪ್ಪರಗಿ 27: ತಾಲೂಕಿನ ಹರನಾಳ ಗ್ರಾಪಂ ನಲ್ಲಿ ನಡೆದ ದೌರ್ಜನ್ಯ ಹಾಗೂ ಅವ್ಯವಹಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಮೊಹರೆ ವೃತ್ತದಿಂದ ಮೆರವಣಿಗೆ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಯ ಮುಂದಿನ ಆವರಣದಲ್ಲಿ ಗುರುವಾರದಂದು ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು. ಗ್ರಾ.ಪಂಯ 15ನೇ ಹಣಕಾಸು ಯೋಜನೆ ಅನುದಾನ, ಪ್ರವರ್ಗ-1 ಸದಸ್ಯರ ಗೌರವದನ ಹಾಗೂ ಹೆಸ್ಕಾಂ ಇಲಾಖೆಗೆ ತುಂಬ ಬೇಕಾದ ಸುಮಾರು 18 ತಿಂಗಳದ ವಿದ್ಯುತ್ ಬಿಲ್ ಸೇರಿದಂತೆ ಸುಮಾರು ವರ್ಷಗಳಿಂದ ಇದೇ ರೀತಿ ಹಲವಾರು ಕಾಮಗಾರಿಗಳನ್ನು ಮಾಡದೆ ಬೋಗಸ್ ಬಿಲ್ ತೆಗೆದಿದ್ದು. ಹರನಾಳ ಹಾಗೂ ಇಂಗಳಗಿ ಗ್ರಾಮದ ದಲಿತರ ಕಾಲೋನಿಯ ರಸ್ತೆ, ಚರಂಡಿ, ಬೀದಿ ದೀಪ ಅಭಿವೃದ್ಧಿ ಮಾಡಲಾರದೆ ಬೋಗಸ್ ಬಿಲ್ ಎತ್ತಿದ್ದಾರೆ ಕೂಡಲೇ ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರು ಹಾಗೂ ಇನ್ನಿತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಭಿವೃದ್ಧಿ ಕಾಮುಗಾರಿಗೆ ಬಳಸಬೇಕಾದ ಹಣವನ್ನು ಮರಳಿ ಸರ್ಕಾರದ ಖಾತೆಗೆ ಜಮ ಮಾಡಿಸಬೇಕು ತಪ್ಪಿತ್ತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅನ್ಯಾಯವನ್ನು ಕೇಳಲು ಹೋದ ದಲಿತ ಸಂಘರ್ಷ ಸಮಿತಿಯ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಧ್ಯಕ್ಷ ಹಾಗೂ ಮುಖಂಡರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಬರುವ ತಿಂಗಳ ಉಗ್ರವಾದ ಹೋರಾಟವನ್ನು ತಾಪಂ ಹಾಗೂ ಜಿಪಂ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂ.ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂ.ಸಂಚಾಲಕ ಪ್ರಕಾಶ ಗುಡಿಮನಿ, ಪದಾಧಿಕಾರಿಗಳಾದ ವಿನಾಯಕ ಗುಣಸಾಗರ, ಅಶೋಕ ಚಲವಾದಿ, ಪರಶುರಾಮ ದಿಂಡವಾರ,ಬಿ.ಎಸ್. ತಳವಾರ, ರಾಜಕುಮಾರ ಸಿಂದಗೇರಿ, ಮಂಜುನಾಥ ಯಂಟಮಾನ, ರಾವತ ಮಾಸ್ತಾರ ತಳಕೇರಿ, ಬಸವರಾಜ ಇಂಗಳಗಿ, ಪರಶುರಾಮ ಬಡಿಗೇರ, ಅಶೋಕ ಗುಡಿಸಲಮನಿ, ಪ್ರಕಾಶ ಶಾಂತಗಿರಿ, ರಾಜು ಮೆಟಗಾರ,ಪಿಂಟೂ ಬಾಸುತ್ಕರ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.