ಸಿದ್ದರಾಮಯ್ಯಗೆ ಮತ್ತೆ ಡಿಕೆಶಿ ಬೆಂಬಲ

ಸಿದ್ದರಾಮಯ್ಯಗೆ ಮತ್ತೆ ಡಿಕೆಶಿ ಬೆಂಬಲ DK Sivakumar has again supported Siddaramaiah

ಬೆಂಗಳೂರು 03: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಜೋರಾಗಿರುವ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಪಕ್ಷ ಮತ್ತು ನಾಯಕತ್ವದ ನಿರ್ಧಾರ ತಮಗೆ ಮುಖ್ಯ ಎಂದು ಹೇಳಿದ ಅವರು, 2028 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವತ್ತ ತಮ್ಮ ಗಮನ ಉಳಿದಿದೆ ಎಂದು ಒತ್ತಿ ಹೇಳಿದರು. 

ಬುಧವಾರ ಮಾತನಾಡಿದ್ದ ಡಿಕೆಶಿ, ʼನನ್ನ ಮುಂದೆ ಬೇರೆ ಆಯ್ಕೆ ಏನಿದೆ? ಮುಖ್ಯಮಂತ್ರಿಗಳ ಬೆನ್ನಿಗೆ ನಿಂತು ಸಹಕಾರ ನೀಡುತ್ತೇನೆ’ ಎಂದು ಹೇಳಿದ್ದರು. ನಂದಿ ದೇಗುಲದ ಆವರಣದಲ್ಲಿ “5 ವರ್ಷ ನಾನೇ ಸಿಎಂ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಂದಿಬೆಟ್ಟದಲ್ಲಿ ಪ್ರತಿಕ್ರಿಯಿಸಿದ್ದ ಡಿಕೆಶಿ, “ನನ್ನ ಮುಂದೆ ಬೇರೆ ಆಯ್ಕೆಗಳು ಏನಿವೆ’ ಎಂದು ಸುದ್ದಿಗಾರರನ್ನು ಪ್ರಶ್ನಿಸಿದ್ದರು. ಮುಖ್ಯಮಂತ್ರಿಗಳ ಬೆನ್ನಿಗೆ ನಿಂತು ಸಹಕಾರ ನೀಡುತ್ತೇನೆ. ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನಾನೊಬ್ಬನೇ ಪಕ್ಷ ಕಟ್ಟಿದ್ದೇನೆಯೇ? ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದೂ ಹೇಳಿದ್ದರು.