ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ

 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ Cultural program by children


ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ 

ಬೆಳಗಾವಿ  14:  ಶ್ರೀನಗರದ ಸಾಯಿ ಸುಮುಖ ಟೆಲಿಕಾಂ ಕ್ಲಸ್ಟರ್ಸ್‌ ಇವರು ಗಣೇಶ ಉತ್ಸವ ಸಂದರ್ಭದಲ್ಲಿ ಮಕ್ಕಳಿಂದ ಹಾಡು, ನೃತ್ಯ ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಸುಮಾರು ಮೂವತ್ತಕ್ಕು ಹೆಚ್ಚು ಮಕ್ಕಳು ಅತ್ಯಂತ ಹುರಪು ಹಮ್ಮಸ್ಸಿನಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಸಿದರು. ಬೃಂದಾ ನಿರೂಪಿಸಿದರು. 

ಭಟ್ ಇವರು ಗಣಪತಿ ಮೂರ್ತಿಯನ್ನು, ತೇಜಸ್ ಪೂಜಾ ಸಾಮಗ್ರಗಳನ್ನು ದೇಣಿಗೆಯಾಗಿ ನೀಡಿದರು. ಹಿರಿಯರಾದ ಸತ್ಯನಾರಾಯಣ, ಪುಟ್ನಂಜಪ್ಪ, ವೆಂಕೇಶಮೂರ್ತಿ, ಮಾರ್ಗದರ್ಶನ ನೀಡಿದರು.  ಅಧ್ಯಕ್ಷರಾದ ಜಯಸುಧಾ ವ್ಯವಸ್ಥಾಪಕರಾದ ಗೋವಿಂದೇಗೌಡ ಕೆ. ಟಿ. ಅಲ್ಲದೇ ಶ್ರೀನಗರದ ಸಾಯಿ ಸುಮುಖ ಟೆಲಿಕಾಂ ಕ್ಷಸ್ಟರ್ಸ್‌ ಮಂಡಳಿಯ ಎಲ್ಲ ಪದಾಧಿಕಾರಿಗಳೂ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. 

ವೆಂಕಟೇಶಮೂರ್ತಿ, ಭಟ್,  ಎಸ್‌. ಬಿ.ಕುಲಕರ್ಣಿ, ದಂಪತಿಗಳು ಗಣಪತಿಗೆ ಪೂಜೆಯನ್ನು ಸಲ್ಲಿಸಿದರು. ವೃಂದಾ, ವಿದ್ಯಾವತಿ, ಶ್ರೀಧರ ವಡಿಯರ, ಶೈಲಜಾ ವಡಿಯರ, ಲತಾ, ಶ್ರುತಿ ಕುಲಕರ್ಣಿ ಇವರು ಉಪಸ್ಥಿತರಿದ್ದರು.