ಕ್ರಿಕೆಟ್ ಪಂದ್ಯ ವಿವಾದ: ಸಹಪಾಠಿಯಿಂದ ಶಾಲಾ ವಿದ್ಯಾರ್ಥಿ ಹತ್ಯೆ
Cricket match controversy: School student killed by classmate
ಚಂದೌಲಿ, ಜೂನ್ 12: ಚಂದೌಲಿ ಜಿಲ್ಲೆಯ ಪ್ರತಾಪ್ಪುರ್ ಗ್ರಾಮದ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕ್ರಿಕೆಟ್ ಪಂದ್ಯ ವಿವಾದದ ಕಾರಣದಿಂದ 10ನೇ ತರಗತಿಯ ವಿದ್ಯಾರ್ಥಿಯನ್ನು ಅವನ ಸಹಪಾಠಿಯೇ ಕೊಲೆ ಮಾಡಿದ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಆರೋಪಿತ ವಿದ್ಯಾರ್ಥಿ ತನ್ನ ನಡುಕಟ್ಟಿನಲ್ಲಿ ಚಾಕುವನ್ನು ಅಡಗಿಸಿಕೊಂಡು ತರಗತಿಗೆ ಪ್ರವೇಶಿಸಿದ್ದಾನೆ. ನಂತರ ಆತ ಲವಕುಶ್ ಯಾದವ್ (17) ಎಂಬ ವಿದ್ಯಾರ್ಥಿಯ ಎದೆಗೆ ಚುಚ್ಚಿದ್ದಾನೆ. ಅಚಾನಕ್ ನಡೆದ ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಲವಕುಶ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದನು . ತರಗತಿಯಲ್ಲಿ ಗೊಂದಲ ಉಂಟಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಯದಿಂದ ಓಡಿಹೋದರು. ಗಲಾಟೆ ಹೆಚ್ಚಾದ ನಂತರ ಇತರ ಶಿಕ್ಷಕರು ಸ್ಥಳಕ್ಕೆ ಬಂದರು.
ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವನು ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಈ ಗಲಾಟೆಯ ನಡುವೆಯಲ್ಲಿ ಆರೋಪಿತ ವಿದ್ಯಾರ್ಥಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸರು ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಆತ ಕೂಡ ಸುಮಾರು 17 ವರ್ಷದ ಅಪ್ರಾಪ್ತನಾಗಿದ್ದಾನೆ ಎಂದು ತಿಳಿಸಿದ್ದಾರೆ. ಅವನು ಈ ಕೃತ್ಯವನ್ನು ಏಕೆ ಮಾಡಿದನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಇಬ್ಬರ ನಡುವೆ ಕ್ರಿಕೆಟ್ ಪಂದ್ಯ ವೇಳೆ ವಿವಾದ ಉಂಟಾಗಿತ್ತು ಎಂದು ತಿಳಿದುಬಂದಿದೆ. ಈ ಘಟನೆ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಸದರ್ ಕೊತ್ವಾಲಿ ಪ್ರದೇಶದ ಪ್ರತಾಪ್ಪುರ್ ಗ್ರಾಮದಲ್ಲಿ ನಡೆದಿದೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 