ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ: ಬಸವಣ್ಣನವರು
Couples' reconciliation in court
ಸಿಂದಗಿ 29; ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವ ರೀತಿಯಲ್ಲಿ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಮದುವೆಯನ್ನುವುದು ಎರಡು ಜೀವಗಳು ಅನ್ಯೂನ್ಯವಾದ ಬಾಂಧವ್ಯಗಳನ್ನು ಹೊಂದಿ ಸಮಾಜಕ್ಕೆ ದಾರೀದೀಪವಾಗಿ ಜೀವಿಸುವುದು ಎನ್ನುವ ಕಲ್ಪನೆಯಲ್ಲಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಬೇಕು ಅದನ್ನು ಅರ್ಧಕ್ಕೆ ನಿಲ್ಲಿಸುವುದು ತಪ್ಪು ಅದಕ್ಕೆ ರಾಜಿ ಸಂದಾನ ಮಾಡುವ ಮೂಲಕ ಸತಿಪತಿಗಳನ್ನು ಒಂದು ಮಾಡಿದ ತೃಪ್ತಿ ನಮ್ಮಲ್ಲಿದೆ ಎಂದು ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರಾದ ಎ.ಆರ್.ಎ ಮುಲ್ಲಾ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಸಿಂದಗಿ ವತಿಯಿಂದ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯದಲ್ಲಿ ವೈವಾಹಿಕ ಪ್ರಕರಣ ಸಂಖ್ಯೆ:.43/2025ಸದರಿ ಪ್ರಕರಣದಲ್ಲಿ ನ್ಯಾಯಾದೀಶರಾದ ಎ ಆರ್ ಎ ಮುಲ್ಲಾ ಗೌರವಾನ್ವಿತ ನ್ಯಾಯಾಧೀಶರವರ ನ್ಯಾಯಾಲಯದಲ್ಲಿ ದಂಪತಿಗಳನ್ನು ರಾಜೀಸಂಧಾನದ ಮೂಲಕ ಗೌರವಾನ್ವಿತ ಹೆಚ್ಚುವರಿ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರ ಸಮ್ಮುಖದಲ್ಲಿ ಪುಪ್ಪ ಮಾಲೆಯನ್ನು ಬದಲಾವಣೆ ಮಾಡುವ ಮೂಲಕ ಸತಿ ಪತಿಗಳನ್ನು ಒಂದುಗೂಡಿಸಿಲಾಯಿತು.
ಸದರಿ ಪ್ರಕರಣದ ನ್ಯಾಯಾಂಗ ಸಂಧಾನಕಾರರಾಗಿ ಎ.ಕೆ.ಕನ್ನೂರು ವಕೀಲರು ಹಾಗೂ ಅರ್ಜಿದಾರರ ಪರ ವಕೀಲರು ಆರ್.ಐ.ಮೋಗಲಾಯಿ ಮತ್ತು ಎದುರುದಾರ ಪರ ವಕೀಲರಾದ ಎನ್.ಎಸ್.ಮನಗೂಳಿ ಮತ್ತು ಜಿ.ಸಿ.ಭಾವಿಕಟ್ಟಿ, ಐ.ಎಸ್.ಹೀರೆಮಠ, ಜಿ.ವೈ.ಬಾಣಿ, ವಕೀಲರು ಇತರ ವಕೀಲರು ಹಾಜರು ಇದ್ದರು, ಮತ್ತು ನ್ಯಾಯಾಲಯದ ಸಿಬ್ಬಂದ್ದಿಯಾದ ಎ.ಎಲ್.ಮುಲ್ಲಾ ಪ್ರಥಮ ದರ್ಜೆ ಸಹಾಯಕರು ಮತ್ತು ಬೆರಳಚ್ಚುಗಾರ ಬಸವರಾಜ ಮೊಕಾಶಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯಿ ಸಿಬ್ಬಂದ್ದಿ ಶ್ರೀಕಾಂತ ಕಟ್ಟಮನಿ ಉಪಸ್ಥೀತರಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 