ಬಂಡಿಗಣಿ ಮಠದಲ್ಲಿ ನಿರಂತರ ದಾಸೋಹ, ಧಾರ್ಮಿಕ ಕಾರ್ಯ

ಬಂಡಿಗಣಿ ಮಠದಲ್ಲಿ ನಿರಂತರ ದಾಸೋಹ, ಧಾರ್ಮಿಕ ಕಾರ್ಯ Continuous worship, religious activities at Bandigani Math

 ರಬಕವಿ-ಬನಹಟ್ಟಿ 15 : ತಾಲೂಕಿನ ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ನಿಧನಾನಂತರ ಮಠದ ವ್ಯಾಜ್ಯಗಳು ನ್ಯಾಯಾಲಯ ಮೆಟ್ಟಿಲೇರಿವೆ. ಭಕ್ತ ಸಮೂಹ ವದಂತಿಗೆ ಕಿವಿಗೊಡದೆ. ಗೊಂದಲಕ್ಕೀಡಾಗಬಾರದೆಂದು ಸ್ವಾಮೀಜಿ ಪುತ್ರ ಶಿವಯ್ಯ ದಾನಯ್ಯ ಮಠದ ಮನವಿ ಮಾಡಿದರು. 

ಬನಹಟ್ಟಿಯ ವಿಶ್ರಾಂತಿ ಧಾಮದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀಗಳ ನಿಧನಾನಂತರ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಭಕ್ತರ ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿರುವುದನ್ನು ಖಂಡಿಸುತ್ತೇವೆ. ಶ್ರೀಗಳೇ ಜೀವಿತಾವಧಿಯಲ್ಲಿ ತಿಳಿಸಿರುವಂತೆ ಬಂಡಿಗಣಿ ಮಠಸನ್ಯಾಸಿ ಮಠವಲ್ಲ, ಬದಲಾಗಿ ಸಂಸಾರಿಕ ಮಠವೆಂದು ಸ್ಪಷ್ಟನೆ ನೀಡಿದ್ದರು. ಅದರಂತೆ ಮಕ್ಕಳಾದ ನಾವೆಲ್ಲ ಸೇರಿ ನಿತ್ಯ ದಾಸೋಹ, ಸಾಮೂಹಿಕ ವಿವಾಹ, ವಿದ್ಯಾರ್ಜನೆ ಸೇರಿದಂತೆ ಬಸವಗೋಪಾಲ ನೀಲಮಾಣಿಕಮಠದಿಂದ ಧಾರ್ಮಿಕ, ನಡೆಯುತ್ತಿರುವ ನಿರಂತರ ಶೈಕ್ಷಣಿಕ, ದಾಸೋಹ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮುನ್ನಡೆಸುತ್ತೇವೆ ಎಂದು ಹೇಳಿದರು. 

ಬಂಡಿಗಣಿಮಠಕ್ಕೆ ಭಕ್ತರೇ ಆಧಾರವಾಗಿದ್ದು, ಯಾವುದೇ ಕಾರಣಕ್ಕೂ ಭಕ್ತರ ಮನಸ್ಸನ್ನು ನೋಯಿಸದೆ, ಅವರ ಆಜ್ಞೆಯನ್ನು ಚಾಚೂತಪ್ಪದೆ ಪಾಲಿಸುತ್ತೇವೆಂದು ಮತ್ತೋರ್ವ ಪುತ್ರ ವಿರುಪಾಕ್ಷಯ್ಯ ಮಠದ ತಿಳಿಸಿದರು. 

ಕಲ್ಯಾಣ ಕಾರ್ಯ ನಡೆಯಲಿದೆ: ಕೆಲವರು ಮಠದ ಆಸ್ತಿಯನ್ನು ಕುಟುಂಬಸ್ಥರು ವೈಯಕ್ತಿಕವಾಗಿ ಬಳಕೆಮಾಡಿಕೊಳ್ಳಲಿದ್ದಾರೆಂಬ ಗುಲ್ಲು ಎಬ್ಬಿಸಿದ್ದು, ಯಾವ ಕಾರಣಕ್ಕೂ ಭಕ್ತರಿಂದಲೇ ನಿರ್ಮಾಣಗೊಂಡಿರುವ ಮಠವನ್ನು ವೈಯಕ್ತಿಕವಾಗಿ ಕಬಳಿಸುವಹುನ್ನಾರ ನಮ್ಮದಿಲ್ಲ. ಬದಲಾಗಿ ಈಗಾಗಲೇ ನಾಲೈದು ದಶಕಗಳಿಂದ ನಡೆಯುತ್ತಿರುವ ದಾಸೋಹ ಸೇರಿದಂತೆ ಎಲ್ಲ ಕಲ್ಯಾಣ ಕಾರ್ಯಗಳು ಶ್ರೀಮಠದ ನೇತೃತ್ವದಲ್ಲಿ ಸುಸೂತ್ರವಾಗಿ ಮುನ್ನಡೆಯಲಿವೆಯೆಂದು ಶಿವಕುಮಾರ ಮಠದ ತಿಳಿಸಿದರು. 

ಖೊಟ್ಟಿ ಮೃತ್ಯುಪತ್ರ ಆರೋಪ : ಕೆಲವಂದಿಷ್ಟು ಜನ ಮಠಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಖೊಟ್ಟಿ ಮೃತ್ಯು ಪತ್ರ ಸೃಷ್ಟಿ ಮಾಡಿರುವುದು ತಿಳಿದು ಬಂದಿರುವ ಕಾರಣ ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣದಾಖಲಾಗಿದ್ದು, ತನಿಖೆ ಬಳಿಕ ಶ್ರೀಗಳ ಮುಗ್ಧತೆ ಬಳಿಕ ದುರುಪಯೋಗಪಡಿಸಿಕೊಂಡವರ ನೈಜತೆ ಎಲ್ಲ ಭಕ್ತರಿಗೆ ತಿಳಿಯಲಿದೆಯೆಂದು ಸ್ಪಷ್ಟಪಡಿಸಿದರು.  

ಎಲ್ಲ ಶಾಖೆಗಳಲ್ಲಿ ನಿರಂತರ ಕಾರ್ಯ : ಬಂಡಿಗಣಿ ಬಸವಗೋಪಾಲ ನೀಲಮಾಣಿಮಠಕ್ಕೆ ಸಂಬಂಧಿಸಿ ದಂತೆ ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಸೇರಿದಂತೆ ಅನೇಕ ಕಡೆಗಳಲ್ಲಿನ 18-20 ಶಾಖೆಗಳಿವೆ. ಎಲ್ಲ ಕಡೆಗಳಲ್ಲಿಯೂ ನಿರಂತರಕಾರ್ಯಗಳು ಮುನ್ನಡೆಯ ಲಿದ್ದು, ಭಕ್ತರುಗೊಂದಲಕ್ಕೀಡಾಗದೆ, ದಾಸೋಹ ರತ್ನ ದಾನೇಶ್ವರ ಶ್ರೀಗಳ ಮೇಲಿಟ್ಟಿರುವ ಭಕ್ತಿಗೆ ಯಾವುದೇ 3 ತರುವ ಕಾರ್ಯ ಬದಲಾಗಿ ಮಾಡುವುದಿಲ್ಲ. ಮಠಗಳು ಇನ್ನಷ್ಟು ಅಭಿವೃದ್ಧಿಯತ್ತ ಸಾಗುವಲ್ಲಿ ನಾವೆಲ್ಲರೂ ಶ್ರಮಿಸುತ್ತೇವೆಂದರು.  ಈ ಸಂದರ್ಭ ದಾನಯ್ಯ ಮಠದ, ಸೋಮಯ್ಯ, ಮಲ್ಲಯ್ಯ, ನಂದಿಕೇಶ್ವರ ಮಠದ ಹಾಗೂ ಹಲವಾರು ಭಕ್ತರು ಉಪಸ್ಥಿತರಿದ್ದರು.