ಶಿಕ್ಷಕ ಸೈಯೀದ ತಹ್ಮದ್ ಮುಲ್ಲಾರಿಗೆ ಅಭಿನಂದನಾ ಪತ್ರ

 ಶಿಕ್ಷಕ ಸೈಯೀದ ತಹ್ಮದ್ ಮುಲ್ಲಾರಿಗೆ ಅಭಿನಂದನಾ ಪತ್ರ Congratulatory letter to teacher Syed Tahmad Mulla

ಲೋಕದರ್ಶನ ವರದಿ 

ಶಿಕ್ಷಕ ಸೈಯೀದ ತಹ್ಮದ್ ಮುಲ್ಲಾರಿಗೆ ಅಭಿನಂದನಾ ಪತ್ರ 

ಧಾರವಾಡ ಅ.09: ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಇಂದು  ಶೇ.100 ರಷ್ಟು ಪೂರ್ಣಗೊಳಿಸಿದ  ಶಿಕ್ಷಕ ಸೈಯೀದ ತಹ್ಮದ್ ಮುಲ್ಲಾ ಅವರಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಉಪಯುಕ್ತರಾದ ಶಂಕರಾನಂದ ಬನಶಂಕರಿ ಅವರು ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಸಮೀಕ್ಷೆ ಮೇಲ್ವಿಚಾರಕಿ ಸುಮಿತಾ ಹಿರೇಮಠ, ಸಿಆರ್ ಪಿ ಶೋಭಾ ಹಾಗೂ ಪಾಲಿಕೆಯ ನೋಡಲ್ ಅಧಿಕಾರಿ ಶೌಕತ್ ಸುಂಕದ್ ಅವರು ಉಪಸ್ಥಿತರಿದ್ದರು.