ಪ್ರಥಮ ಅಕ್ಷರಾಭ್ಯಾಸ ಮತ್ತು ಪ್ರಥಮ ಪಾಠಕ್ಕೆ ಚಾಲನೆ
Commencement of the first lessons in writing and reading
ತಾಳಿಕೋಟೆ 10: ಬಾಲಭಾರತಿ ವಿದ್ಯಾಮಂದಿರದಲ್ಲಿ ಶಿಶು ಮಂದಿರ ಮತ್ತು ಒಂದನೆಯ ತರಗತಿ ಮಕ್ಕಳಿಗೆ ಪ್ರಥಮ ಅಕ್ಷರಾಭ್ಯಾಸ ಮತ್ತು ಪ್ರಥಮ ಪಾಠ ಕಾರ್ಯಕ್ರಮವು ಗುರುವಾರ ನಡೆಯಿತು.ತಾಯಿಯ ಮಡಿಲಲ್ಲಿ ಕುಳಿತ ಪುಟ್ಟಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಶ್ರೀಧರಾಚಾರ್ಯ ಜೋಶಿ ಶ್ರೀಕಾರ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಸಮೂಹ ಸಂಪನ್ಮೂಲ ವ್ಯಕ್ತಿ ರಾಜು ವಿಜಾಪುರ, ಶೃಂಗೇರಿ ಮಠದಲ್ಲಿ ಇರುವಂತೆ ಮೊದಲ ಅಕ್ಷರಾಭ್ಯಾಸದ ಸಂಸ್ಕೃತಿಯನ್ನು ಪಟ್ಟಣದ ಬಾಲಭಾರತಿ ಶಿಕ್ಷಣ ಸಂಸ್ಥೆಯವರೂ ಅನುಸರಣೆ ಮಾಡುತ್ತಿರುವುದು ಸಂತಸ ತಂದಿದೆ. ಮಕ್ಕಳಲ್ಲಿ ನಾಡಿನ ಸಂಸ್ಕಾರ, ಸಂಸ್ಕೃತಿ ಬಿತ್ತವುದರೊಂದಿಗೆ ಉತ್ತಮ ಮೌಲ್ಯಗಳನ್ನು ಸಹ ಈ ಶಾಲೆಯವರು ಮಕ್ಕಳಲ್ಲಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ.
ಕೋಶಾಧ್ಯಕ್ಷ ಶ್ಯಾಮ ಹಂಚಾಟೆ, ಬಾಲಭಾರತಿ ಪ್ರಾಥಮಿಕ ಶಾಲೆ ಅಧ್ಯಕ್ಷ ಹಣಮಂತ್ರಾವ್ ದೇಶಪಾಂಡೆ, ಸ್ವಾಮಿ ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆ ಅಧ್ಯಕ್ಷ ಶ್ರೀನಿವಾಸ ಸೋನಾರ, ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು. 150ಕ್ಕೂ ಅಧಿಕ ಮಕ್ಕಳು ಅಕ್ಷರಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.ಮುಖ್ಯಶಿಕ್ಕರುಗಳಾದ, ಪ್ರದೀಪ ಗೊಂಡ, ಮಹೇಶ ಓದಿ ಹಿರಿಯ ಶಿಕ್ಷಕ ರಮೇಶ ಕುಲಕಲರ್ಣಿ, ಧರ್ಮಣ್ಣ ಕಟ್ಟಿಮನಿ, ಶೈಲಶ್ರೀ ಸುರಪುರ, ಸಮೃದ್ಧಿ ಸುರಪುರ ಇತರರಿದ್ದರು. ಸನ್ನಿಧಿ ಯಾತಗಿರಿ ಸಹನಾ ವಾಲಿ ನಿರ್ವಹಿಸಿದರು, ಶ್ರೀದೇವಿ ಬಿರಾದಾರ ಸ್ವಾಗತಿಸಿದರು. ಗಿರಿಜಾ ಮೊಹಿತೆ ಮಾತಾಜಿ ವಂದಿಸಿದರು.
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ 