17ಕ್ಕೆ ಹೊಸಕೇರಿಮಠದಲ್ಲಿ ಶ್ರೀಗಳ ಪುಣ್ಯಸ್ಮರಣೆ ಮತ್ತು ಕಾರ್ತಿಕೋತ್ಸವ
Commemoration of the saint and Kartikotsava at Hosakeri Math at 17th
ಹಾವೇರಿ 14 : ಹಾವೇರಿಯಲ್ಲಿ 63 ಮಠಗಳಿದ್ದು ಮರಿಕಲ್ಯಾಣವೆಂದೇ ಪ್ರಸಿದ್ಧವಾಗಿದೆ, ಹುಕ್ಕೇರಿಮಠದ ಶಾಖಾ ಹೊಸಕೇರಿಮಠವು ನಾಗೇಂದ್ರನಮಟ್ಟಿಯಲ್ಲಿದ್ದು ಸರ್ವಧರ್ಮ ಸಮನ್ವಯ ಹಾಗೂ ಶ್ರದ್ಧೆ ಭಕ್ತಿಯ ಪರಮ ಪವಿತ್ರ ಸ್ಥಾನವಾಗಿದೆ.ಮಹಾಮಹಿಮರು ಶಿವಬಸವ ಶಿವಯೋಗಿಗಳು ಈ ಮಠದಲ್ಲಿ ತಪವಗೈದು ಪುಣ್ಯಭೂಮಿಯನ್ನಾಗಿಸಿದ್ದಾರೆ, ಎಲ್ಲಿ ನೋಡಿದರಲ್ಲಿ ಚಿಗುರಲೆಯಿಂದ ಕೂಡಿದ ಬಿಲ್ವಪತ್ರೆಯ ವನ ಕಣ್ಣಿಗೆೆ ಆನಂದವನ್ನುಂಟು ಮಾಡುತ್ತದೆ. ಈ ಮಠದ ಸ್ಥಾಪನೆ ಕುರಿತಂತೆ ಇಲ್ಲಿ ದೊರೆತ ಶಾಸನದಲ್ಲಿ ಶ್ರೀಂಗಳಸ ಶಕೆ 1719 ಸಾಧೂಛತ್ರ ಎಂದು ಉಲ್ಲೇಖಗೊಂಡಿದೆ. 300 ವರ್ಷಗಳ ಹಿಂದೆ ಬಸವಲಿಂಗ ಶಿವಯೋಗಿಗಳು ಲೋಕಸಂಚಾರ ಕೈಗೊಂಡಂಹ ಸಾಧೂ ಸತ್ಪುರುಷರಿಗೆ ಧರ್ಮಾರ್ಥವಾಗಿ ಪ್ರಸಾದ, ವಸತಿಗಳನ್ನು ಒದಗಿಸಲು ಮಠವನ್ನು ನಿರ್ಮಿಸಿದ್ದಾರೆ ಎನ್ನಬಹುದು.
ಈ ಮಾತನ್ನು ಪುಷ್ಟಿಕರಿಸಲು ಇಲ್ಲಿ ಹಾಳು ಬಿದ್ದ ಬಾವಿ ಹಾಗೂ ಅನುಷ್ಠಾನಕ್ಕೆ ಬಳಸುತ್ತಿದ್ದ ಹಳೆಯ ಗವಿಗಳು ಮೂಕ ಸಾಕ್ಷಿಗಳಾಗಿ ನಿಂತಿವೆ. ಬಸವಲಿಂಗ ಶಿವಯೋಗಿಗಳು ಮತ್ತು ಸಿದ್ಧಲಿಂಗ ಶಿವಯೋಗಿಗಳು ಶಿವಪೂಜಾ ತಪೋನಿಷ್ಠರು, ವಾಕ್ಸಿದ್ಧಿಪುರುಷರು ಆಗಿದ್ದರು. ಉಭಯ ಪೂಜ್ಯರು ತಮ್ಮ ಇಚ್ಛಾ ಅನುಸಾರ ಅವರ ಸಮಾಧಿಗಳನ್ನು ಈ ಮಠದಲ್ಲಿ ಮಾಡಿಸಿಕೊಂಡರು. ಇವರ ನಂತರ ವಿಭೂತಿ ಪುರುಷ ಶಿವಬಸವ ಶಿವಯೋಗಿಗಳು ಹುಕ್ಕೇರಿಮಠದ ಅಧಿಕಾರವನ್ನು ವಹಿಸಿಕೊಂಡರು. ಹೊಸಕೇರಿಮಠವು ಅನೇಕ ಪೂಜ್ಯರ ತಪೋಭೂಮಿಯಾಗಿದೆ. ಈ ಪ್ರಶಾಂತವಾದ ಹೊಸಕೇರಿಮಠದಲ್ಲಿ ಪ್ರತಿ ವರುಷ ಕಾರ್ತಿಕ ಮಾಸದಲ್ಲಿ ಉಭಯ ಶ್ರೀಗಳ ಪುಣ್ಯಸ್ಮರಣೆ ಮತ್ತು ಕಾರ್ತಿಕೋತ್ಸವ ಪ್ರಸ್ತುತ ಮಠಾಧ್ಯಕ್ಷರಾದ ಶ್ರೀ ಸದಾಶಿವ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಅದ್ಧೂರಿಯಾಗಿ ನೆರವೇರುತ್ತದೆ.
ಈ ವರ್ಷ ದಿ,17 ಸೋಮವಾರ ಬೆಳಗ್ಗೆ ಉಭಯ ಪೂಜ್ಯರ ಗದ್ದುಗೆಗೆ ಮಹಾರುದ್ರಾಭಿಷೇಕ ನಂತರ ಷಟಸ್ಥಲ ಧ್ವಜಾರೋಹಣ, ಸಂಜೆ ಪೂಜ್ಯ ಸದಾಶಿವ ಮಹಾಸ್ವಾಮಿಗಳವರ ರುದ್ರಾಕ್ಷಿ ತುಲಾಭಾರ, ಕಾರ್ತಿಕೋತ್ಸವ ಹಾಗೂ ಮಹಾಪ್ರಸಾದ ನೆರವೇರುವುದು. ಕಾರಣ ಸರ್ವ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪೂಜ್ಯರ ಕೃಪೆಗೆ ಪಾತ್ರರಾಗಬೇಕೆಂದು ರಾಜಯೋಗಿ ಶಿವಬಸವ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 