ತಿಮ್ಮಾಪುರ ಅವರಿಂದ ಕ್ಲಿನಿಕ್ ಉದ್ಘಾಟನೆ
Clinic inaugurated by Thimmapura
ರನ್ನ ಬೆಳಗಲಿ. 19- ಮುಧೋಳ ತಾಲೂಕಿನ ರನ್ನ ಬೆಳಗಲಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಪಟ್ಟಣ ಪಂಚಾಯತ್ ರನ್ನ ಬೆಳಗಲಿ ಆಶ್ರಯದಲ್ಲಿ ನಮ್ಮ ಕ್ಲೀನಿಕ್ ಉದ್ಘಾಟನೆಯನ್ನು ಗುರುವಾರದಂದು ಅಬಕಾರಿ ಸಚಿವರು ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಆದಂತ ಆರ್ ಬಿ ತಿಮ್ಮಾಪುರವರು ಉದ್ಘಾಟಿಸಿದರು.
ಈ ಕ್ಲಿನಿಕ್ ನಿಂದ ಬಡವರಿಗೆ ಹಾಗೂ ಇನ್ನಿತರವರಿಗೆ ತುಂಬಾ ಅನುಕೂಲವಾಗಲಿದ್ದು ಇಲ್ಲಿ ತುಂಬಾ ನುರಿತ ಮತ್ತು ಅನುಭವಿಕ ವೈದ್ಯರಿದ್ದು ಅದರ ಉಪಯೋಗ ಪಡೆದುಕೊಂಡು ಎಲ್ಲರೂ ಸದೃಢ ಜೀವನ ನಡೆಸಬೇಕೆಂದು ಹೇಳಿದರು. ನಂತರ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಜನತೆ ಆರ್ಥಿಕ ಅಭಿವೃದ್ಧಿ ಹೊಂದಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಜೀವನದಲ್ಲಿ ಎಲ್ಲ ಸಂಪತ್ತಿಗಿಂತ ಆರೋಗ್ಯ ದೊಡ್ಡ ಸಂಪತ್ತು ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಕಾರ್ಯಕ್ರಮಕ್ಕೆ ರನ್ನ ಬೆಳಗಲಿಯ ಪೂಜ್ಯರಾದ ಶ್ರೀ ಸಿದ್ದರಾಮ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.
ಮುಧೋಳ್ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದುಗೌಡ ಪಾಟೀಲ್ ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಕಿವಡಿ, ಡಾ. ವೆಂಕಟೇಶ್ ಮಲಘಣ ಮುಖಂಡರಾದ ಶಿವನಗೌಡ ಪಾಟೀಲ್ ಉದಯ ಸಾರವಾಡ, ಪ್ರವೀಣ್ ಪಾಟೀಲ್, ಸಂಗಪ್ಪ ಅಮಾತಿ, ಚಿನ್ನು ಅಂಬಿ,ಪರಮನಂದ ಕೊಟರಟ್ಟಿ, ಸಿದ್ದು ಮಾಳಿ, ಲಕ್ಕಪ್ಪ ಹಂಚಿನಾಳ, ಮುಬಾರಕ್ ಅತ್ತಾರ್, ನೀಲಕಂಠ ಸೈದಾಪುರ್ ಮುತ್ತಪ್ಪ ಸನ್ನಟ್ಟಿ, ಸದಾಶಿವ್ ಕುಲಗೋಡ, ಮಲ್ಲು ಹೊಸಪೇಟಿ, ಪ್ರಕಾಶ ಕೊಣ್ಣೂರ, ಮುದುಕಪ್ಪ ದೋಬಸಿ ಮತ್ತು ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಹಾಗೂ ಪಟ್ಟಣದ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 