5 ದಶಕಗಳ ನಂತರ ಒಂದಾದ ವರ್ಗ ಸ್ನೇಹಿತರು
Classmates reunite after 5 decades
5 ದಶಕಗಳ ನಂತರ ಒಂದಾದ ವರ್ಗ ಸ್ನೇಹಿತರು
ಕಾಗವಾಡ 15: ಒಂದೇ ಶಾಲೆಯಲ್ಲಿ ಆಟ-ಪಾಠ ಮಾಡಿದ ಸಹಪಾಠಿಗಳು ಬರೋಬ್ಬರಿ 51 ವರ್ಷಗಳ ನಂತರ ಒಂದಾಗಿ, ಹಳೆ ನೆನಪುಗಳನ್ನು ಮೆಲುಕು ಹಾಕಿ, ಭಾವುಕರಾದ ಘಟನೆಗೆ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ವಿದ್ಯಾಲಯ ಸಾಕ್ಷಿಯಾಗಿದೆ. ಹೌದು 1973-74 ನೇ ಸಾಲಿನಲ್ಲಿ ಶೇಡಬಾಳ ಪಟ್ಟಣದ ಎಸ್ಎಸ್ಎಸ್ ಸಮಿತಿಯ ಸನ್ಮತಿ ವಿದ್ಯಾಲಯದಲ್ಲಿ ಎಸ್ಎಸ್ಎಲ್ಸಿ ಓದಿದ ವಿದ್ಯಾರ್ಥಿಗಳು ಈಗ ಹಿರಿಯ ಜೀವಿಗಳಾಗಿ ಸುಮಾರು 51 ವರ್ಷಗಳ ಬಳಿಕ ರವಿವಾರ ದಿ. 13 ರಂದು ಅದೇ ಶಾಲೆಯಲ್ಲಿ ಒಂದಾಗಿ ತಮ್ಮ ಬಾಲ್ಯದ ಜೀವನವನ್ನು ನೆನೆದು, ಭಾವುಕರಾದರು. ತಾವು ಕಲಿತ ವರ್ಗ ಕೋಣೆಗಳು, ಆಟವಾಡಿದ ಆಟದ ಮೈದಾನ ಕಂಡು, ಹಿರಿಹಿರಿ ಹಿಗ್ಗಿದರು. ತಮಗೆ ಪಾಠ ಬೋಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಿ, ಗುರವಂದನೆ ಅರ್ಿಸಿ, ಖುಷಿಪಟ್ಟರು. ತಮ್ಮ ಹಳೆ ನೆನಪುಗಳನ್ನು ವೇದಿಕೆಯ ಮುಖಾಂತರ ಅನೇಕರು ಹಂಚಿಕೊಂಡರು. ನಿವೃತ್ತ ಶಿಕ್ಷಕ ಬಿ.ಎ. ಸವದತ್ತಿ, ಎಂ.ಎ. ಗಣೆ, ಎಂ.ಡಿ. ಅಲಾಸೆ ಸೇರಿದಂತೆ ಶಿಕ್ಷಕರು ಮತ್ತು ಹಳೇ ವಿದ್ಯಾರ್ಥಿ ಎಸ್.ಬಿ. ಉಗಾರೆ ಸ್ವಾಗತಿಸಿ, ಪರಿಚಯಿಸಿದರು. ಡಿ.ಟಿ. ಚೌಗುಲೆ, ಬಿ.ಕೆ. ಚಿಂಚಲೆ ತಮ್ಮ ವೃತ್ತಿ ಜೀವನದ ಕುರಿತು ತಿಳಿಸಿದರು. ಡಿ.ಜಿ. ಹೊನಕಾಂಬಳೆ, ಎಂ.ಎ ನಾಂದ್ರೆ, ಅಭಯಕುಮಾರ ನಾಂದ್ರೆ, ಸಿ.ಎಂ. ರತ್ನಪ್ಪಗೋಳ, ಎಂ.ಎ ಮುಜಾವರ, ಆರ್.ಕೆ. ಕೋಥಳಿ, ಆರ್.ಎನ್. ನರಸಗೌಡರ, ಆರ್.ಸಿ. ಕದಮ್, ವ್ಹಿ.ಎ. ಕುಡಚೆ, ಆರ್.ಬಿ. ಗಣೆ, ಆರ್.ಎಸ್. ಗಿರಿಗೌಡರ, ಎಸ್.ಬಿ. ಅವಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 