ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಬೇಕು: ಸಿ.ಆರ್‌.ಸಿ ವಸಂತ

ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಬೇಕು: ಸಿ.ಆರ್‌.ಸಿ ವಸಂತ Children should be given value-based education: CRC Vasantha


ಯರಗಟ್ಟಿ, 12 : 'ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಬೇಕು' ಎಂದು ಸಿ.ಆರ್‌.ಸಿ ವಸಂತ ಬಡಿಗೇರ ಹೇಳಿದರು. ವಿಶ್ವಕರ್ಮ ಪೂರ್ವ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೂತ್ಸವ ಉದ್ಘಾಟಿಸಿ ಅವರು ಮಾತನಾಡಿದರು.'ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಾಗಿದೆ. ಮೌಲ್ಯಗಳಲ್ಲಿ ಸಾಮಾಜಿಕ ಮೌಲ್ಯಗಳು ಮುಖ್ಯವಾಗಿವೆ. ಅನೌಪಚಾರಿಕ ಶಿಕ್ಷಣವನ್ನೂ ಕಲಿಕೆಯಲ್ಲಿ ಅಳವಡಿಸಿಕೂಳ್ಳಬೇಕು' ಎಂದರು.ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.ಶಾಲೆಯ ಸಂಸ್ಥೆಯ ಆನಂದ ಬಡಿಗೇರ, ನಿಲಯ ಪಾಲಕರಾದ ಆಶಾ ಪರೀಟ, ಸಂಸ್ಥೆಯ ಕಾರ್ಯದರ್ಶಿ ಮಹಾದೇವ ಬಡಿಗೇರ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಡಾ. ವಿಶ್ವನಾಥ ತಾವಂಶಿ, ಸಚೀನ ಬಡಿಗೇರ, ಕೇದಾರ ಬಾಕಳೆ, ವಿಜಯ ದೊಡ್ಡಮನಿ, ಅಲಿಸಾಬ ಕರ್ನಾಚಿ, ಮಲ್ಲಪ್ಪ ಶಿಂಗಣ್ಣವರ, ಶಶಧರ ತಳವಾರ, ಕು.ಅರವಿಂದ ಚನ್ನಮೇತ್ರಿ, ರಜೀಯಾ ಜಮಾದಾರ ಸೇರಿದಂತೆ ಶಾಲಾ ಶಿಕ್ಷಕರು ಇದ್ದರು. 


Annual Day Celebration Cultural Programmes Social Values Informal Education