ವೃಕ್ಷಮಾತೆ ತಿಮ್ಮಕ್ಕಳ ಅಗಲಿಕೆಗೆ ಕಂಬನಿ ಮಿಡಿದ ಮಕ್ಕಳು
Children mourn the loss of their three children, the tree mother.
ಲೋಕದರ್ಶನ ವರದಿ
ವೃಕ್ಷಮಾತೆ ತಿಮ್ಮಕ್ಕಳ ಅಗಲಿಕೆಗೆ ಕಂಬನಿ ಮಿಡಿದ ಮಕ್ಕಳು
ಮಹಾಲಿಂಗಪುರ 15: ಮರಗಳನ್ನು ಮಕ್ಕಳಂತೆ ಬೆಳೆಸಿ ನಿಸರ್ಗ ಪರಂಪರೆಯನ್ನು ಹಸಿರಾಗಿಸಿ ಹೋದ ತಿಮ್ಮಕ್ಕ ಸಕಲರಿಗೂ ಮಾದರಿ ಮಹಿಳೆ ಎಂದು ಶಿಕ್ಷಕ, ಕವಿ ಸುರೇಶ ರಾಜಮಾನೆ ಹೇಳಿದರು.
ಸಮೀಪದ ಮೆಟಗುಡ್ಡ ಗ್ರಾಮದ ಡೋಣಿ ತೋಟದ ಶಾಲೆಯಲ್ಲಿ ಹಮ್ಮಿಕೊಂಡ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲ್ರಿವರು ಮಾತನಾಡಿದರು.
ಆರ್.ಎಂ.ಸುತಾರ್ ಮಾತನಾಡಿ ಪರಿಸರ ಪ್ರೇಮ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.
ಸಾಮೂಹಿಕವಾಗಿ ಎಲ್ಲರೂ ಮೌನಾಚರಣೆಯೊಂದಿಗೆ ತಿಮ್ಮಕ್ಕನವರಿಗೆ ದುಃಖತಪ್ತ ನಮನಗಳನ್ನು ಸಲ್ಲಿಸಿದರು. ಪತ್ರಿಕೆಗಳಲ್ಲಿ ಬಂದ ಪತ್ರಿಕಾ ವರದಿಗಳನ್ನು ಮಕ್ಕಳು ಒಟ್ಟುಗೂಡಿಸಿ "ವೃಕ್ಷಮಾತೆಗೆ ನಮನ" ಎಂಬ ಭಿತ್ತಿಪತ್ರ ತಯಾರಿಸಿ ಪ್ರದರ್ಶಿಸಿ ತಿಮ್ಮಕ್ಕಳ ಬಗ್ಗೆ ಸವಿಸ್ತಾರವಾಗಿ ಓದಿ ಹೇಳಿದರು. ವಿದ್ಯಾರ್ಥಿಗಳಾದ ಚೇತನಾ ಮೇತ್ರಿ, ಸೌಜನ್ಯ ಡೋಣಿ, ನಿರ್ಮಲಾ ಆಗೋಜಿ ಶಾಲಾ ಪರಿಸರ ಮತ್ತು ಪರಿಸರದ ಕಾಳಜಿ ಬಗ್ಗೆ ಮಾತನಾಡಿದರು. ಮಕ್ಕಳಷ್ಟೇ ಮರಗಳು ಮುಖ್ಯ ಎಂಬ ಘೋಷಣೆಗೆ ಎಲ್ಲರೂ ಧ್ವನಿಯಾದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 