ವೃಕ್ಷಮಾತೆ ತಿಮ್ಮಕ್ಕಳ ಅಗಲಿಕೆಗೆ ಕಂಬನಿ ಮಿಡಿದ ಮಕ್ಕಳು
Children mourn the loss of their three children, the tree mother.
ಲೋಕದರ್ಶನ ವರದಿ
ವೃಕ್ಷಮಾತೆ ತಿಮ್ಮಕ್ಕಳ ಅಗಲಿಕೆಗೆ ಕಂಬನಿ ಮಿಡಿದ ಮಕ್ಕಳು
ಮಹಾಲಿಂಗಪುರ 15: ಮರಗಳನ್ನು ಮಕ್ಕಳಂತೆ ಬೆಳೆಸಿ ನಿಸರ್ಗ ಪರಂಪರೆಯನ್ನು ಹಸಿರಾಗಿಸಿ ಹೋದ ತಿಮ್ಮಕ್ಕ ಸಕಲರಿಗೂ ಮಾದರಿ ಮಹಿಳೆ ಎಂದು ಶಿಕ್ಷಕ, ಕವಿ ಸುರೇಶ ರಾಜಮಾನೆ ಹೇಳಿದರು.
ಸಮೀಪದ ಮೆಟಗುಡ್ಡ ಗ್ರಾಮದ ಡೋಣಿ ತೋಟದ ಶಾಲೆಯಲ್ಲಿ ಹಮ್ಮಿಕೊಂಡ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲ್ರಿವರು ಮಾತನಾಡಿದರು.
ಆರ್.ಎಂ.ಸುತಾರ್ ಮಾತನಾಡಿ ಪರಿಸರ ಪ್ರೇಮ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.
ಸಾಮೂಹಿಕವಾಗಿ ಎಲ್ಲರೂ ಮೌನಾಚರಣೆಯೊಂದಿಗೆ ತಿಮ್ಮಕ್ಕನವರಿಗೆ ದುಃಖತಪ್ತ ನಮನಗಳನ್ನು ಸಲ್ಲಿಸಿದರು. ಪತ್ರಿಕೆಗಳಲ್ಲಿ ಬಂದ ಪತ್ರಿಕಾ ವರದಿಗಳನ್ನು ಮಕ್ಕಳು ಒಟ್ಟುಗೂಡಿಸಿ "ವೃಕ್ಷಮಾತೆಗೆ ನಮನ" ಎಂಬ ಭಿತ್ತಿಪತ್ರ ತಯಾರಿಸಿ ಪ್ರದರ್ಶಿಸಿ ತಿಮ್ಮಕ್ಕಳ ಬಗ್ಗೆ ಸವಿಸ್ತಾರವಾಗಿ ಓದಿ ಹೇಳಿದರು. ವಿದ್ಯಾರ್ಥಿಗಳಾದ ಚೇತನಾ ಮೇತ್ರಿ, ಸೌಜನ್ಯ ಡೋಣಿ, ನಿರ್ಮಲಾ ಆಗೋಜಿ ಶಾಲಾ ಪರಿಸರ ಮತ್ತು ಪರಿಸರದ ಕಾಳಜಿ ಬಗ್ಗೆ ಮಾತನಾಡಿದರು. ಮಕ್ಕಳಷ್ಟೇ ಮರಗಳು ಮುಖ್ಯ ಎಂಬ ಘೋಷಣೆಗೆ ಎಲ್ಲರೂ ಧ್ವನಿಯಾದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 