ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಚವ್ಹಾಣ ಆಯ್ಕೆ

ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಚವ್ಹಾಣ ಆಯ್ಕೆ  Chavan selected for state-level ideal teacher award

ಲೋಕದರ್ಶನ ವರದಿ 

ತಾಂಬಾ 05: ಜ್ಞಾನ ವಿಜ್ಞಾನ ಪರಿಷತ್ತು (ರಿ)ಬೆಂಗಳೂರು ಹಾಗೂ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಮಾಜಮುಖಿ ಸೇವೆ ಸಲ್ಲಿಸಿ ಸಮಾನತೆ ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಿಸ್ವಾರ್ಥವಾಗಿ ಬೋಧಿಸುತ್ತಿರುವ ಆದರ್ಶ ಶಿಕ್ಷಕರಿಗೆ ಕೊಡ ಮಾಡುವ ರಾಜ್ಯಮಟ್ಟದ ಆದರ್ಶ ಶಿಕ್ಷಕ  ಪ್ರಶಸ್ತಿಗೆ ತಾಂಬಾ ಗ್ರಾಮದ ಎಸ್‌.ಎಸ್‌.ಪ್ರೌಢ ಶಾಲೆಯ ಮುಖ್ಯಗುರುಗಳಾದ ಎಸ್‌.ಎಮ್‌.ಚವ್ಹಾಣ ಅವರು ಆಯ್ಕೆಯಾಗಿದ್ದಾರೆಂದು ಕೆವಿಜಿಎಸ್ ವಿಜಯಪುರ ಜಿಲ್ಲಾಧ್ಯಕ್ಷರಾದ ಗಣೇಶ ಕಾಂಬಳೆ ತಿಳಿಸಿದ್ದಾರೆ.  

ಫೆ. 8 ರಂದು ಕಾಯಕ ಯೋಗಿ ರಾಮಾಯಣ ಶಿಕ್ಷಣ ಸಂಸ್ಥೆಯ ಮಾನಸ ಗಂಗೋತ್ರಿ ಪ್ರತಿಷ್ಠಿತ ವಸತಿ ಶಾಲೆ ತಿಡುಗುಂದಿ ವಿಜಯಪುರದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.