ಖಾಸಗಿ ಭೂಮಿ ಕಬ್ಜಾ ಮಾಡಲು ಕೆಲವರ ಹುನ್ನಾರ : ಚನ್ನಪ್ಪ ಆರೋಪ
Channappa alleges that some are trying to seize private land
ಕಂಪ್ಲಿ 10: ಖಾಸಗಿ ಭೂಮಿಯನ್ನು ಕಬ್ಜಾ ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಕಂಪ್ಲಿ ಕ್ಷೇತ್ರಾಧ್ಯಕ್ಷ ಸಿ.ಎ.ಚನ್ನಪ್ಪ ಆರೋಪಿಸಿದರು. ಅವರು ಶನಿವಾರ ಪಟ್ಟಣದ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ನೇತೃತ್ವವಹಿಸಿ ಮಾತನಾಡಿ, ಪಟ್ಟಣದ 4/6ನೇ ವಾರ್ಡಿನ ಸರ್ವೆ ನಂ.1400ನಲ್ಲಿ 5 ಎಕರೆ 34 ಸೆಂಟ್ಸ್ ಜಾಗ ಇದ್ದು, ಇದರಲ್ಲಿ 50ಸೆಂಟ್ಸ್ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಹೊರಟಿದ್ದಾರೆ. ಈಗಾಗಲೇ ಕೆಲವರು ಸರ್ಕಾರಿ ಉದ್ಯಾನವನ ಎಂದು ಪುರಸಭೆಗೆ ಮನವಿ ಮಾಡಿದ್ದಾರೆ. 1982ರಲ್ಲಿ ಇಲ್ಲಿನ ಜಾಗವು ಎನ್ಎ ಆಗಿದೆ. ವಲಿಸಾಬ್ ಅವರ ಆಸ್ತಿಯನ್ನು ಸರ್ಕಾರಿ ಜಾಗವೆಂದು ಸುಳ್ಳು ಹೇಳಿ, ವಶಪಡೆಸಿಕೊಳ್ಳಲು ಹೊರಟಿದ್ದಾರೆ. 50 ಸೆಂಟ್ಸ್ ಜಾಗವನ್ನು ಕಾನೂನಾತ್ಮಕವಾಗಿ ತೆರವುಗೊಳಿಸಲಾಗಿದೆ. 104 ನಿವೇಶಗಳನ್ನು ಮಾರಾಟ ಮಾಡಿದ್ದು, ಇನ್ನೂ 50ಸೆಂಟ್ಸ್ ಜಾಗ ಉಳಿದಿದೆ. ಆದ್ದರಿಂದ ಈ ಜಾಗವನ್ನು ಬೇರೆಯವರಿಗೆ ಒತ್ತುವರಿ ಮಾಡುವುದಕ್ಕೆ ಬಿಡುವುದಿಲ್ಲ. ಪುರಸಭೆ ಅಧಿಕಾರಿಗಳು ದಾಖಲೆಗಳನ್ನು ಪರೀಶೀಲಿಸಿ, ಫಾರಂ ನಂ-3 ನೀಡಿದ್ದು, ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ವಾದ(ಪ್ರೋ.ಬಿ.ಕೃಷ್ಣಪ್ಪ) ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬಸಪ್ಪ ಭಾವಿಕಟ್ಟಿ, ಭೀಮವಾದ ಸಂಘಟನೆಯ ಪೃಥ್ವಿರಾಜ್ಸಿಂಗ್, ಯುವ ಮುಖಂಡರಾದ ಐ.ಶಂಕರ್, ಹುಸೇನಪ್ಪ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 