ಸಡಗರ, ಸಂಭ್ರಮದಿಂದ ಜರುಗಿದ ಚಾಂಗದೇವರ ಜಾತ್ರೆ
Changadevara fair held with pomp and celebration
ಬೀಳಗಿ 08: ಸ್ಥಳೀಯ ಯಮನೂರೇಶ್ವರ ಚಕ್ರವರ್ತಿ ಚಾಂಗದೇವರ ಜಾತ್ರೆಯು ಸಡಗರ, ಸಂಭ್ರಮದಿಂದ ನಡೆಯಿತು.ಜಾತ್ರೆಯ ಅಂಗವಾಗಿ ರಂಜಿತ ಘೋರೆ್ಡ ಅವರ ಮನೆಯಿಂದ ಗಂಧ (ಸಂದಲ್) ವನ್ನು ಶನಿವಾರ ರಾತ್ರಿ ವಿವಿಧ ವಾದ್ಯಗಳೊಂದಿಗೆ ಹಿಂದು-ಮುಸ್ಲಿಂ ಬಾಂಧವರು ಯಮನೂರೇಶ್ವರ ದೇವಸ್ಥಾನಕ್ಕೆ ಒಯ್ದರು. ನಂತರ ಹಿರಿಯರ ನೇತೃತ್ವದಲ್ಲಿ ಗಂಧ ಎರಿಸುವ ಕಾರ್ಯಕ್ರಮ ನೆರವೇರಿತು.ಪ್ರತಿ ವರ್ಷವೂ ಅತಿ ವಿಜೃಂಭಣೆಯಿಂದ ಉರುಸ್ ಕಾರ್ಯಕ್ರಮ ಜರಗುತ್ತದೆ. ಹಿಂದೂ ಮುಸ್ಲಿಂ ಸಮುದಾಯದವರು ಈ ಉರಸ್ ನ್ನು ಆಚರಿಸುತ್ತಾರೆ. ಮಹಾತ್ಮರ ಈ ದರ್ಗಾವು ಧಾರ್ಮಿಕ, ಸಾಮಾಜಿಕ ಭಾವೈಕ್ಯ ಸಂಕೇತವಾಗಿ ಗುರುತಿಸಿಕೊಂಡಿವೆ.
ಭಾನುವಾರ ಬೆಳಿಗ್ಗೆಯಿಂದಲೇ ಬೀಳಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಜನರು ಕುಟುಂಬ ಸದಸ್ಯರೊಂದಿಗೆ ಯಮನೂರೇಶ್ವರ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿ ಸಕ್ಕರೆ, ಲೋಬಾನ ಕೊಡುವ ಮೂಲಕ ಹರಕೆ ತೀರಿಸಿದರು.ರಂಜಿತ ಘೋರೆ್ಡ, ಆಕರ್ಷ ಘೋರೆ್ಡ, ಶಂಕರ ಬಡಿಗೇರ, ಶ್ರೀಶೈಲ ದಳವಾಯಿ, ಲಕ್ಷ್ಮಣ ತೋಟದ,ಹುಸೆನಸಾಬ ಬಳೂತಿ, ಸಂಗಪ್ಪ ಕಟಗೇರಿ,ಅಡಿವೆಪ್ಪ ಕೆರೂರ, ಮೈನುಸಾಬ್ ತಹಶೀಲ್ದಾರ್,ಸಂತೋಷ ಜಂಬಗಿ, ಇಸ್ಮಾಯಿಲ್ ಕಮತರ ಮನಸುರ್ ಕಾಲೆಬಾವಗೋಳ, ಮೇಹಬೂಬ ಮಕಾಂದಾರ, ಸುನಿಲ ಸಿದ್ದಾಪುರ,ದೀಲಿಪ ಮರಾಠೆ, ನಿಂಗಪ್ಪ ಗಾಂಜಿ,ಶಿವು ವಸ್ತ್ರದ ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 