ತರಬೇತಿ ಪಡೆದ ಪಿಎಂ ವಿಶ್ವಕರ್ಮ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ
ಬ್ಯಾಡಗಿ 30 : ಕುಶಲಕರ್ಮಿಯವರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಪ್ರಧಾನಿ ಮಂತ್ರಿ ಯವರು ವಿಶ್ವಕರ್ಮ ಯೋಜನೆ ಲಕ್ಷಾಂತರ ಕುಶಲಕರ್ಮಿಗಳಿಗೆ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಕಡ್ಡಿಪುಡಿ ತಿಳಿಸಿದರು.ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವಕರ್ಮ ಯೋಜನೆ ಯಡಿ ಟೈಲರಿಂಗ್ ತರಬೇತಿ ಪಡೆದ ಮೊದಲ ಬ್ಯಾಚ್ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಮಾತನಾಡಿದ ಅವರು. ಪಿಎಂ ವಿಶ್ವಕರ್ಮ ಯೋಜನೆಯು ಕೇಂದ್ರೀಯ ಯೋಜನೆಯಾಗಿದ್ದು ಇದು ಕುಶಲಕರ್ಮಿಗಳಿಗೆ ಅವರ ಕುಲ ಕಸಬುಗಳನ್ನು ಆಧರಿಸಿ ತರಬೇತಿಯನ್ನು ನೀಡುವುದರ ಮೂಲಕ ಉಚಿತ ಸಾಲ. ಕೌಶಲ್ಯ ತರಬೇತಿ. ಆಧುನಿಕ ಉಪಕರಣಗಳ ಡಿಜಿಟಲ್ ವಹಿವಾಟು ಮತ್ತು ಮಾರುಕಟ್ಟೆಗೆ ಅವರು ತಯಾರಿಸುವ ವಸ್ತುಗಳನ್ನು ತಂದು ಮಾರಾಟ ಮಾಡಲು ಪ್ರೋತ್ಸಾಹಿಸುವ ಮೂಲಕ ಕುಶಲ ಕರ್ಮಿಯರನ್ನು ಬೆಂಬಲಿಸುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಕುಶಲಕರ್ಮಿಯರಿಗೆ ವರದಾನವಾಗಿದ್ದು ತಾವು ಕಲಿತಿರುವ ಕುಶಲ ಕಸುಬುಗಳನ್ನು ಮತ್ತೊಮ್ಮೆ ಗುರುತಿಸಿ ಸಾಲ ನೀಡುವುದರ ಮೂಲಕ ಜೀವನ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರೊಫೆಸರ್ ಡಾ. ದೇವೇಂದ್ರ. ಬಿಎನ್. ಎಚ್ ಜಿ ಸಣ್ಣ ಗೌಡ್ರ. ಅಮೃತ ಮಡಿವಾಳರ್ ಹಾಗೂ ತರಬೇತಿ ಪಡೆದ ಎಲ್ಲ ಫಲಾನುಭವಿಗಳು ಉಪಸ್ಥಿತರಿದ್ದರು.