ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 69 ನೇ ಮಹಾಪರಿ ನಿರ್ವಾಣ ದಿನದ ಆಚರಣೆ

ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 69 ನೇ ಮಹಾಪರಿ ನಿರ್ವಾಣ ದಿನದ ಆಚರಣೆ  Celebration of the 69th Mahapari Nirvana Day of Dr. Babasaheb Ambedkar

ಕೊಪ್ಪಳ  6: ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಇಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 69 ನೇ ಮಹಾಪರಿ ನಿರ್ವಾಣ ದಿನದ ಆಚರಣೆ ಮಾಡಲಾಯಿತು. ಈ ವೇಳೆ ಅಂಬೇಡ್ಕರ್ ಅವರ  ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ, ಗೌರವ ನಮನ, ಪ್ರಾರ್ಥನೆ ಸಲ್ಲಿಸಲಾಯಿತು, ವಿ.ವಿ.ಯ ಕುಲಸಚಿವರಾದ ಡಾ.ಎಸ್‌.ವಿ.ಡಾಣಿ ಯವರು ವಿಶೇಷ, ಪೂಜೆ ಸಲ್ಲಿಸಿದರು. ಆಡಳಿತಾಧಿಕಾರಿ ಪ್ರೊ.ತಿಮ್ಮಾರೆಡ್ಡಿ ಮೇಟಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕರು, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು, ನಂತರ ಕಾರ್ಯಕ್ರಮದ ವಿಶೇಷತೆ ಕುರಿತು ಕುಲ ಸಚಿವರಾದ ಡಾ: ಎಸ್‌.ವಿ. ಡಾಣಿಯವರು, ಪ್ರೊ.ತಿಮ್ಮಾರೆಡ್ಡಿ ಮೇಟಿಯವರು ಮಾತನಾಡಿದರು, ಪ್ರೊ.ವೀರೇಶ್ ಉತ್ತಂಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು,  ಪ್ರೊ.ವಿರುಪಾಕ್ಷಿ ವಂದಿಸಿದರು.