ಹೋಳ್ಳಿ ಹಬ್ಬವನ್ನು ಸೌಹಾರ್ದ ಶಾಂತಿಯುತವಾಗಿ ಆಚರಿಸಿ: ಪಿಎಸ್ಐ ಅರವಿಂದ ಅಂಗಡಿ
Celebrate Holi festival in a peaceful and harmonious manner: PSI Aravinda Angadi
ಆಲಮೇಲ 01 : ಯಾವುದೇ ಧರ್ಮದ ಹಬ್ಬಗಳಾಗಲಿ ಭಾವೈಕ್ಯತೆಯಿಂದ ಶಾಂತಿಯುತವಾಗಿ ಹಬ್ಬಗಳು ಆಚರಣೆ ಮಾಡಬೇಕು ಎಂದು ಪಿಎಸ್ಐ ಅರವಿಂದ ಅಂಗಡಿ ಹೇಳಿದರು. ಶನಿವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಹೂಳಿ ಹಬ್ಬದ ನಿಮಿತ್ತವಾಗಿ ಪೂರ್ವ ಬಾವಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೆಳಿದರು. ಹಬ್ಬದ ಆಚರಣೆ ಸಂದರ್ಭದಲ್ಲಿ ಕಾನೂನು ಬಂಗ ಗೊಳಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು. ಹೂಳಿ ಹುಣ್ಣಿಮೆಯಂದು ಪಿಯುಸಿ ಪರೀಕ್ಷೆ ಇರುವದರಿಂದ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಯಾರು ಬಣ್ಣ ಎರಚುವದು ತೊಂದರೆ ನೀಡಬಾರದು. ಹಾಗೆ ವಿನಾಕಾರಣ ಕಿಡಗೆಡಿತನ ಮಾಡಿ ಸಮಜಾದಲ್ಲಿ ಶಾಂತಿ ಬಂಗಗೊಳಿಸುವರನ್ನು ಗ್ರಾಮದ ಹಿರಿಯರು ತಿಳಿ ಹೇಳಿ ಇಲ್ಲದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳವುದಾಗಿ ಹೇಳಿದರು. ಶ್ರೀಶೈಲ ಮಠಪತಿ, ಹರೀಶ ಯಂಟಮಾನ, ಮೈಬೂಬ ಮಾಳಿ ಮುಂತಾದವರು ಮಾತನಾಡಿದರು. ಶಾಂತಿ ಸಭೆಯಲ್ಲಿ ಬಸವರಾಜ ತೆಲ್ಲೂರ, ವಾಹಬ ಸುಂಬಡ, ದೇವಪ್ಪ ಗುಣಾರಿ, ಸಿದ್ದುಗೌಡ ಕೊಳಾರಿ, ರಾಜಾಹ್ಮದ ಪಟೇಲ, ಸಂತೋಷ ಜರಕರ ಮುಂತಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 