ಹೋಳ್ಳಿ ಹಬ್ಬವನ್ನು ಸೌಹಾರ್ದ ಶಾಂತಿಯುತವಾಗಿ ಆಚರಿಸಿ: ಪಿಎಸ್ಐ ಅರವಿಂದ ಅಂಗಡಿ
Celebrate Holi festival in a peaceful and harmonious manner: PSI Aravinda Angadi
ಆಲಮೇಲ 01 : ಯಾವುದೇ ಧರ್ಮದ ಹಬ್ಬಗಳಾಗಲಿ ಭಾವೈಕ್ಯತೆಯಿಂದ ಶಾಂತಿಯುತವಾಗಿ ಹಬ್ಬಗಳು ಆಚರಣೆ ಮಾಡಬೇಕು ಎಂದು ಪಿಎಸ್ಐ ಅರವಿಂದ ಅಂಗಡಿ ಹೇಳಿದರು. ಶನಿವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಹೂಳಿ ಹಬ್ಬದ ನಿಮಿತ್ತವಾಗಿ ಪೂರ್ವ ಬಾವಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೆಳಿದರು. ಹಬ್ಬದ ಆಚರಣೆ ಸಂದರ್ಭದಲ್ಲಿ ಕಾನೂನು ಬಂಗ ಗೊಳಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು. ಹೂಳಿ ಹುಣ್ಣಿಮೆಯಂದು ಪಿಯುಸಿ ಪರೀಕ್ಷೆ ಇರುವದರಿಂದ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಯಾರು ಬಣ್ಣ ಎರಚುವದು ತೊಂದರೆ ನೀಡಬಾರದು. ಹಾಗೆ ವಿನಾಕಾರಣ ಕಿಡಗೆಡಿತನ ಮಾಡಿ ಸಮಜಾದಲ್ಲಿ ಶಾಂತಿ ಬಂಗಗೊಳಿಸುವರನ್ನು ಗ್ರಾಮದ ಹಿರಿಯರು ತಿಳಿ ಹೇಳಿ ಇಲ್ಲದಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳವುದಾಗಿ ಹೇಳಿದರು. ಶ್ರೀಶೈಲ ಮಠಪತಿ, ಹರೀಶ ಯಂಟಮಾನ, ಮೈಬೂಬ ಮಾಳಿ ಮುಂತಾದವರು ಮಾತನಾಡಿದರು. ಶಾಂತಿ ಸಭೆಯಲ್ಲಿ ಬಸವರಾಜ ತೆಲ್ಲೂರ, ವಾಹಬ ಸುಂಬಡ, ದೇವಪ್ಪ ಗುಣಾರಿ, ಸಿದ್ದುಗೌಡ ಕೊಳಾರಿ, ರಾಜಾಹ್ಮದ ಪಟೇಲ, ಸಂತೋಷ ಜರಕರ ಮುಂತಾದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 